Skip to main content

Posts

Showing posts from October, 2011

ಯುವ ಜನತೆ ಮತ್ತು ಸಾಮಾಜಿಕ ತಾಣಗಳು

        ಸಂ ಪರ್ಕ ಮಾಧ್ಯಮಗಳು ಒಂದೆರಡಲ್ಲ,ಹಲವು ಬಗೆಯವು.ಅನಾದಿಕಾಲದಿಂದಲೂ ಇಂತಹ ಮಾಧ್ಯಮಗಳು ಜಾರಿಯಲ್ಲಿವೆ. ಕಾಲ ಬದಲಾದಂತೆ ಶೀಘ್ರ ಸಂಪರ್ಕ ಕಲ್ಪಿಸಬಹುದಾದ ಸಾಧನಗಳು ಬರಲಾರಂಭಿಸಿದವು.ಇಂದಿನ ಈ-ಮೇಲ್,ಸಾಮಾಜಿಕ ತಾಣಗಳು (ಫೇಸ್ ಬುಕ್,ಟ್ವಿಟ್ಟರ್..) ಪ್ರಚಲಿತ ಸಾಧನಗಳು.ಆದರೆ ಸಾಂಪ್ರದಾಯಿಕ ಪತ್ರ ವ್ಯವಹಾರಕ್ಕೆ ಇದ್ದ ಗೈರತ್ತು ಈ ಮಾಧ್ಯಮಗಳಲ್ಲಿ ಕಾಣುವುದು ಕಷ್ಟ.ಆದರೆ ಹೊಸತನಕ್ಕೆ ಅಂಟಿಕೊಳ್ಳುವ ಅನಿವಾರ್ಯತೆ ಬೇರೆಯದೇ ಪ್ರಪಂಚಕ್ಕೆ ಕರೆದೊಯ್ಯುತ್ತವೆ.ಎಲ್ಲೋ-ಎಂದೋ ಭೇಟಿಯಾದವರು, ಯಾವುದೋ ಊರಿನಲ್ಲಿರುವವರು ಹೀಗೆ ಹತ್ತು ಹಲವು ಕಾರಣಗಳಿಂದ ದೂರವಾದವರನ್ನು ಹತ್ತಿರಕ್ಕೆ,ಸದಾ ಸಂಪರ್ಕದಲ್ಲಿರುವಂತೆ ಮಾಡುವ ಛಾತಿ ಸಾಮಾಜಿಕ ತಾಣಗಳಂತಹ ಅಂತರ್ಜಾಲ ಸಂಬಂಧಿ ವ್ಯವಸ್ಥೆಗಳಿಗಿವೆ.ವಯಸ್ಸಿನ ಅಂತರವಿಲ್ಲದೇ ಎಲ್ಲರನ್ನು ಆಕರ್ಷಿಸುವ ತಾಣಗಳು ಮನೆ-ಮನಗಳಲ್ಲಿ ಹಸುರಾಗಿವೆ.ಇವುಗಳ ಬಳಕೆ ಹೆಚ್ಚಾಗುತ್ತಲೇ ಇದೆ.ಒಂದು ಘಳಿಗೆಯೂ ಬಿಟ್ಟು ಇರಲಾರದಷ್ಟು ಪ್ರಭಾವ ಬೀರಿವೆ.ಭಾರತ ಫೇಸ್ ಬುಕ್ ಬಳಕೆಯಲ್ಲಿ ವಿಶ್ವದಲ್ಲೇ ಮೂರನೇ ಸ್ಥಾನದಲ್ಲಿದೆ.        ಯುವ ಜನಾಂಗ ಈ ತಾಣಗಳ ಅತಿ ಹೆಚ್ಚು ಬಳಕೆ ಮಾಡುತ್ತಿರುವುದು ಗೊತ್ತಿರುವ ವಿಚಾರವೆ.ಗೆಳೆಯರ ಬಳಗ ಕಟ್ಟಿಕೊಳ್ಳುವ ಆಸಕ್ತಿ ಹೆಚ್ಚಿಸುತ್ತಿರುವ ಸಾಮಾಜಿಕ ತಾಣಗಳು ಓದಿನ ಮೇಲಿರಬೇಕಾದ ಗಮನ ಕುಂಠಿತಗೊಳಿಸುತ್ತಿದೆ ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ.ಇದರಲ್ಲಿ ಒಂದಷ್ಟು ಸತ್ಯವಿದೆ.ದಿನದ ಸುಮಾರು

ಜಾತಿರಾಜಕಾರಣ ಯಾಕೆ ಬೇಕು..?

      ನ ಮ್ಮದು ಜ್ಯಾತ್ಯಾತೀತ ದೇಶ.ಹೀಗೆಂದು ಹೇಳಿಕೊಳ್ಳುವವರಿಗೆ ಲೆಕ್ಕವಿಲ್ಲ.ಆದರೂ,ಅನೇಕ ರೀತಿ-ರಿವಾಜು,ಜಾತಿ-ಧರ್ಮಗಳನ್ನು ಹೊಂದಿರುವ ದೇಶದಲ್ಲಿ ಸಾಮರಸ್ಯ ಕಾಣಬೇಕಾದರೆ ಜ್ಯಾತ್ಯಾತೀತತೆಯ ಕಡೆ ಒಲವು ಮೂಡಿಸುವ ಪ್ರಯತ್ನ ಮಾಡುವ ಅನಿವಾರ್ಯತೆ ಇದೆ.ಸರಳ ನಡೆ-ನುಡಿ,ತಾತ್ವಿಕ ವಿಚಾರಗಳ ಕುರಿತ ಚರ್ಚೆ,ಸಹೋದರತೆಯನ್ನು ಸಾರುವ ಗುಣಗಳನ್ನು ಬೆಳೆಸಿಕೊಳ್ಳುವ ರೂಢಿ ಮಾಡಿಕೊಳ್ಳಬೇಕಿದೆ.ಜನರ ನಡುವೆ ಒಮ್ಮತದ ನಿರ್ಧಾರ ಕೈಗೊಳ್ಳಲು ಪ್ರಯತ್ನಗಳು ಸಾಗಬೇಕಿವೆ.ದಿನೇ-ದಿನೇ ಹೆಚ್ಚುತ್ತಿರುವ ಜನಸಂಖ್ಯೆಯಲ್ಲಿ ಕೆಲವೊಂದು ಜಾತಿ-ಧರ್ಮಕ್ಕೆ ಸೇರಿದವರ ಸಂಖ್ಯೆ ಜಾಸ್ತಿಯಿರಬಹುದು.ಇದರಿಂದ ಸಾಮಾಜಿಕ ಬದಲಾವಣೆಗಳು ಸಾಧ್ಯ.ಹೀಗಾಗಿ ಸಮತೋಲನ ಕಾಯ್ದುಕೊಳ್ಳುವ ಜವಾಬ್ದಾರಿ ಮತ್ತೆ ಜನರದೇ ಆಗಿರುತ್ತದೆ.ಆದರೆ ಇದೆಲ್ಲಕ್ಕೂ ಸಂವಿಧಾನತ್ಮಕ ರೂಪು-ರೇಷೆಗಳಿರುತ್ತವೆ.ಮತದಾನದ ಮೂಲಕ ಆಯ್ಕೆಯಾಗಿರುವ ವ್ಯಕ್ತಿ ಊರಿನ ಪ್ರತಿನಿಧಿಯಾಗಿರುತ್ತಾನೆ.ರಾಜಕೀಯ ಪಕ್ಷಗಳು ಮೊದಲ ಹಂತದಲ್ಲಿ ಜನರನ್ನು ವಿಭಾಗಿಸಿಬಿಡುತ್ತದೆ.ಇಲ್ಲಿ ನಡೆಯುವ ಎಲ್ಲಾ ಲೆಕ್ಕಾಚಾರಗಳು ಜನರ ಹಿತದೃಷ್ಠಿಯಿಂದ ಎಂಬ ಮುಖವಾಡ ಹೊತ್ತಿರುತ್ತದೆಯಲ್ಲದೆ ಅಸಲಿ ಅಂಶ ಬೇರೆಯದೇ ಆಗಿರುತ್ತದೆ.          ರಾಜಕೀಯಕ್ಕೂ ಜಾತಿ-ಧರ್ಮಕ್ಕೂ ಯಾವುದೇ ಸಂಬಂಧವಿಲ್ಲ.ಆದರೆ ಇಂದು ನಡೆಯುತ್ತಿರುವುದೆಲ್ಲ ಜಾತಿ ರಾಜಕಾರಣವೆ.ಇದರ ಬೇರು ವಿಶಾಲವಾಗಿ ಹರಡಿ ನಿಂತಿದೆ.ಮತದಾರರನ್ನು ವಿಕೇಂದ್ರಿಕರಿಸಲು ಜಾತಿಯೆಂಬ ಅಸ್ತ್ರದ ಉಪಯೋಗ ಅವ

೨ಜಿ ಅವಾಂತರ

    ೨ಜಿ ತರಂಗಾಂತರ ವಿತರಣೆಯಲ್ಲಿ ನಡೆದಿರುವ ಹಗರಣ ಭಾರತ ಕಂಡ ಅತೀ ದೊಡ್ಡ ಪ್ರಕರಣಗಳಲ್ಲೊಂದು.ಈವರೆಗೆ ದೇಶದ ಇತಿಹಾಸದಲ್ಲಿ ನಡೆದಿರುವ ಎಲ್ಲಾ ಹಗರಣಗಳನ್ನು ಹಿಮ್ಮೆಟ್ಟಿದೆ.ಯುಪಿಎ ಸರ್ಕಾರಕ್ಕೆ ಮತ್ತೊಂದು ಕಳಂಕ ತಟ್ಟಿಂದಂತಾಗಿದೆ.ಪ್ರತಿಪಕ್ಷಗಳು ಇದನ್ನೇ ಚುನಾವಣೆಯ ದಾಳವನ್ನಾಗಿಸಿಕೊಳ್ಳಲು ತುದಿಗಾಲಲ್ಲಿ ನಿಂತಿವೆ.ಬಿಜೆಪಿ ಸೇರಿದಂತೆ ಹಲವು ಪಕ್ಷಗಳು ಜೆಪಿಸಿ (Joint Parliamentory Committee)ಯ ರಚನೆಗೆ ಒತ್ತಾಯಿಸಿಯಾಯಿತು.ಈ ಮಧ್ಯೆ ಸರ್ಕಾರ ಪಿಎಸಿ (Public Accounts Committee) ಗೆ ಹಗರಣದ ಕುರಿತು ತನಿಖೆ ನಡೆಸಲು ಸೂಚಿಸಿತು.ಇಷ್ಟೇಯಲ್ಲದೆ ಸಿಎಜಿ (Comptroller and Audit General of India) ಸಲ್ಲಿಸಿದ ವರದಿ ಪ್ರಕಾರ ಸುಮರು ೧.೭೬ ಲಕ್ಷ ಕೋಟಿ ರುಪಾಯಿಗಳ ಭಾರೀ ನಷ್ಟದ ಲೆಕ್ಕ ನಿಬ್ಬೆರಗಾಗುವಂತೆ ಮಾಡಿತು.ಬಿಜೆಪಿ ಮತ್ತು ಎನ್ ಡಿ ಎ ಯ ಮಿತ್ರ ಪಕ್ಷಗಳಾದ ಎಐಎಡಿಎಂಕೆ  ,ಸಮಾಜವಾದಿ ಪಾರ್ಟಿ,ಬಿಜೆಡಿಗಳು ಸ್ವತಂತ್ರ ಭಾರತದ ದೊಡ್ಡ ಹಗರಣವೆಂದು ಸಾಬೀತು ಮಾಡಲು ಮುಂದಾದವು.ದೂರ ಸಂಪರ್ಕ ಸಚಿವರಾಗಿದ ಎ.ರಾಜಾ ಜೈಲು ಸೇರಿದ್ದು ಮತ್ತಷ್ಟು ಕುತೂಹಲ ಕೆರಳಿಸಿತು.ಮಾಧ್ಯಮಗಳಲ್ಲಿ ಹಠಾತ್ ಬೆಳವಣಿಗೆಯ ಸುದ್ದಿ ಬಿತ್ತರವಾಗಲು ಶುರುವಾಯಿತು.ತರಂಗಾಂತರ ಹರಾಜು ಪ್ರಕ್ರಿಯೆಯಲ್ಲಿ ನಡೆದ ದೋಷ ಯುಪಿಎ ಸರ್ಕಾರವನ್ನೆ ಅಲುಗಾಡುವಂತೆ ಮಾಡಿತು.ವಿಚಾರಣೆ ನಡೆಯುತ್ತಿದ್ದಂತೆ ಹಿಂದಿನ ವಿತ್ತ ಸಚಿವ ಪಿ.ಚಿದಂಬರಂ, ಕನ್ನಿಮೋಳಿ ಮತ್ತು ಹಿಂದಿನ ಗೃ

-: ಮುತ್ತಿನ ಹನಿಗಳು :-

------೧------ ಚುಂ- ಬನಕ್ಕೆ ಲಗ್ಗೆಯಿಡುವ ಯುವ ಜೋಡಿಗಳು ಅದೆಂತಹ ಪ್ರಕೃತಿ ಆರಾಧಕರು..! ------೨------ ಹೂದೋಟದಲ್ಲಿ ಕಾಣದ ಪತಂಗಗಳು ಯಥೇಚ್ಛ ಮಧು ಸವಿಯಲು ಯುವತಿಯರ ಹಿಂದೆ ಬಿದ್ದಿವೆಯಂತೆ..!

ಏನಿದು ತೆಲಂಗಾಣ...?

        ದಿ ನೇ-ದಿನೇ ಸ್ವತಂತ್ರ ರಾಜ್ಯದ ಕುರಿತಾಗಿ ತೆಲಂಗಾಣ ಹೋರಾಟಗಾರರ ಕೂಗು ಮುಗಿಲು ಮುಟ್ಟುತ್ತಿದೆ.ಈ ಹೋರಾಟ ಇಂದು ನಿನ್ನೆಯದಲ್ಲ.ಹಲವಾರು ಮಂದಿ ಪ್ರಾಣ ತೆತ್ತಿದ್ದಾರೆ. ಆದರೆ ಇನ್ನೂ ಪರಿಹಾರ ಕಂಡುಕೊಳ್ಳುವಲ್ಲಿ ಸಫಲವಾಗಿಲ್ಲ.ತೆಲಂಗಾಣ ಆಂಧ್ರ ಪ್ರದೇಶದ ಒಂದು ಭಾಗ.ಹೈದರಾಬಾದ್ ನಿಜಾಮರು ಇದರ ಆಡಳಿತ ನಡೆಸುತ್ತಿದ್ದರು.ಪ್ರಾಂತೀಯವಾಗಿ ಆಂಧ್ರವನ್ನು ತೆಲಂಗಾಣ,ರಾಯಲಸೀಮ ಮತ್ತು ಆಂಧ್ರ ಕರಾವಳಿಗಳೆಂದು ಮೂರು ಭಾಗಗಳಾಗಿ ವಿಂಗಡಿಸಲಾಗಿದೆ.ಒಟ್ಟು ೨೩ ಜಿಲ್ಲೆಗಳಲ್ಲಿ ೧೦ ಜಿಲ್ಲೆಗಳು ತೆಲಂಗಾಣದ ತೆಕ್ಕೆಯಲ್ಲಿವೆ.ಸ್ವಾತಂತ್ರ್ಯ ನಂತರ ನಿಜಾಮರು ತಮ್ಮ ರಾಜ್ಯವನ್ನು ವಿಲೀನಗೊಳಿಸಲು ಒಪ್ಪಿರಲಿಲ್ಲ. ಆದರೆ ೧೯೪೮ರಲ್ಲಿ ಒತ್ತಾಯದಿಂದ ಭಾರತ ಸರ್ಕಾರ ಆಂಧ್ರದ ಜೊತೆಗೂಡಿಸಿತು.ಮದ್ರಾಸ್ ರಾಜ್ಯದ ಭಾಗವಗಿದ್ದ ರಾಯಲಸೀಮ ಮತ್ತು ಆಂಧ್ರ ಕರಾವಳಿ ಪ್ರದೇಶಗಳು ತೆಲಂಗಾಣದ ಜೊತೆ ಒಂದುಗೂಡಿದವು.ಆಂಧ್ರ ಪ್ರದೇಶ ರಾಜ್ಯಕ್ಕೆ ಅಸ್ತಿತ್ವ ಸಿಕ್ಕ ನಂತರ ತೆಲಂಗಾಣದ ಕೆಲವು ಭಾಗಗಳು ಕರ್ನಾಟಕ ಮತ್ತು ಮಹಾರಾಷ್ಟ್ರದ ಪಾಲಾದವು.೧೯೬೯ರಿಂದೀಚೆಗೆ ಪ್ರತ್ಯೇಕ ರಾಜ್ಯದ ಚಳುವಳಿ ಉಗ್ರ ರೂಪ ಪಡೆದುಕೊಂಡಿತು.ಉಸ್ಮಾನಿಯ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಪ್ರಾರಂಭಿಸಿದ ಚಳುವಳಿಯಲ್ಲಿ ಸಾವಿರಾರು ಜನರು ಭಾಗಿಗಳಾದರು. ಸುಮಾರು ೩೫೦ ಮಂದಿ ಸಾವನ್ನಪ್ಪಿದರು.ಆಂಧ್ರ ಮಾಜಿ ಮುಖ್ಯ ಮಂತ್ರಿ ಚನ್ನ ರೆಡ್ಡಿ ಈ ಚಳುವಳಿಯ ಪೂರ್ಣ ಲಾಭ ಪಡೆದುಕೊಂಡರು.’ತೆಲಂಗಾಣ ಪ್ರಜಾ ಸಮಿತಿ’ ಎಂಬ ಪಕ