Skip to main content

ಏನಿದು ತೆಲಂಗಾಣ...?


        ದಿನೇ-ದಿನೇ ಸ್ವತಂತ್ರ ರಾಜ್ಯದ ಕುರಿತಾಗಿ ತೆಲಂಗಾಣ ಹೋರಾಟಗಾರರ ಕೂಗು ಮುಗಿಲು ಮುಟ್ಟುತ್ತಿದೆ.ಈ ಹೋರಾಟ ಇಂದು ನಿನ್ನೆಯದಲ್ಲ.ಹಲವಾರು ಮಂದಿ ಪ್ರಾಣ ತೆತ್ತಿದ್ದಾರೆ. ಆದರೆ ಇನ್ನೂ ಪರಿಹಾರ ಕಂಡುಕೊಳ್ಳುವಲ್ಲಿ ಸಫಲವಾಗಿಲ್ಲ.ತೆಲಂಗಾಣ ಆಂಧ್ರ ಪ್ರದೇಶದ ಒಂದು ಭಾಗ.ಹೈದರಾಬಾದ್ ನಿಜಾಮರು ಇದರ ಆಡಳಿತ ನಡೆಸುತ್ತಿದ್ದರು.ಪ್ರಾಂತೀಯವಾಗಿ ಆಂಧ್ರವನ್ನು ತೆಲಂಗಾಣ,ರಾಯಲಸೀಮ ಮತ್ತು ಆಂಧ್ರ ಕರಾವಳಿಗಳೆಂದು ಮೂರು ಭಾಗಗಳಾಗಿ ವಿಂಗಡಿಸಲಾಗಿದೆ.ಒಟ್ಟು ೨೩ ಜಿಲ್ಲೆಗಳಲ್ಲಿ ೧೦ ಜಿಲ್ಲೆಗಳು ತೆಲಂಗಾಣದ ತೆಕ್ಕೆಯಲ್ಲಿವೆ.ಸ್ವಾತಂತ್ರ್ಯ ನಂತರ ನಿಜಾಮರು ತಮ್ಮ ರಾಜ್ಯವನ್ನು ವಿಲೀನಗೊಳಿಸಲು ಒಪ್ಪಿರಲಿಲ್ಲ. ಆದರೆ ೧೯೪೮ರಲ್ಲಿ ಒತ್ತಾಯದಿಂದ ಭಾರತ ಸರ್ಕಾರ ಆಂಧ್ರದ ಜೊತೆಗೂಡಿಸಿತು.ಮದ್ರಾಸ್ ರಾಜ್ಯದ ಭಾಗವಗಿದ್ದ ರಾಯಲಸೀಮ ಮತ್ತು ಆಂಧ್ರ ಕರಾವಳಿ ಪ್ರದೇಶಗಳು ತೆಲಂಗಾಣದ ಜೊತೆ ಒಂದುಗೂಡಿದವು.ಆಂಧ್ರ ಪ್ರದೇಶ ರಾಜ್ಯಕ್ಕೆ ಅಸ್ತಿತ್ವ ಸಿಕ್ಕ ನಂತರ ತೆಲಂಗಾಣದ ಕೆಲವು ಭಾಗಗಳು ಕರ್ನಾಟಕ ಮತ್ತು ಮಹಾರಾಷ್ಟ್ರದ ಪಾಲಾದವು.೧೯೬೯ರಿಂದೀಚೆಗೆ ಪ್ರತ್ಯೇಕ ರಾಜ್ಯದ ಚಳುವಳಿ ಉಗ್ರ ರೂಪ ಪಡೆದುಕೊಂಡಿತು.ಉಸ್ಮಾನಿಯ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಪ್ರಾರಂಭಿಸಿದ ಚಳುವಳಿಯಲ್ಲಿ ಸಾವಿರಾರು ಜನರು ಭಾಗಿಗಳಾದರು. ಸುಮಾರು ೩೫೦ ಮಂದಿ ಸಾವನ್ನಪ್ಪಿದರು.ಆಂಧ್ರ ಮಾಜಿ ಮುಖ್ಯ ಮಂತ್ರಿ ಚನ್ನ ರೆಡ್ಡಿ ಈ ಚಳುವಳಿಯ ಪೂರ್ಣ ಲಾಭ ಪಡೆದುಕೊಂಡರು.’ತೆಲಂಗಾಣ ಪ್ರಜಾ ಸಮಿತಿ’ ಎಂಬ ಪಕ್ಷ ಕಟ್ಟಿ ಚಳುವಳಿಗೆ ಮತ್ತಷ್ಟು ರಂಗು ತುಂಬಿದರು.ಆ ಹೊತ್ತಿಗೆ ಇಂದಿರಾ ಗಾಂಧಿ ಚನ್ನ ರೆಡ್ಡಿಯನ್ನು ಮು.ಮಂತ್ರಿ ಮಾಡಿ ಚಳುವಳಿಗೆ ಲಗಾಮು ಹಾಕಿದರು.ಇಷ್ಟಕ್ಕೂ ಈ ಚಳುವಳಿಯ ಉದ್ದೇಶ ತೀರ ಭಿನ್ನವಾಗಿದ್ದವು.:
೧. ಸಾಂಸ್ಕೃತಿಕ ಭಿನ್ನತೆ--ನಿಜಾಮರ ಕಾಲದಲ್ಲಿ ಉತ್ತರ ಭಾರತದ ಆಚರಣೆಗಳು ಚಾಲ್ತಿಯಲ್ಲಿದ್ದು,ಆಂಧ್ರಕ್ಕೆ ಒಗ್ಗಿಕೊಳ್ಳುವುದು ತ್ರಾಸದಾಯಕವಾಗಿತ್ತು.
೨.ತೆಲಂಗಾಣದ ಹೆಚ್ಚಿನ ಜನರಿಗೆ ಮೀಸಲಾತಿ ವ್ಯವಸ್ಥೆ ಇತ್ತು. ರಾಜ್ಯದ ವಿಲೀನದಿಂದ ಮೀಸಲಾತಿಗೆ ಪೆಟ್ಟು ಬೀಳಬಹುದೆಂಬ ಹೆದರಿಕೆ.
೩.ಆಂಧ್ರ ಮದ್ರಾಸ್ ಅಧೀನದಲ್ಲಿ ಹೆಚ್ಚು ಬೆಳವಣಿಗೆ ಕಂಡಿತ್ತು.ಅದರ ಜೊತೆ ಸ್ಪರ್ಧೆಗಿಳಿಯುವುದು ತೆಲಂಗಾಣಕ್ಕೆ ಕಷ್ಟ ಸಾಧ್ಯವಾಗಿತ್ತು.
           ಪ್ರಸ್ತುತ ಚಳುವಳಿಯ ಮುಂದಾಳತ್ವ ವಹಿಸಿರುವ ಕೆ.ಚಂದ್ರಶೇಖರ ರಾವ್,೧೯೯೧ರಲ್ಲಿ ತೆಲುಗು ದೇಶಂ ಪಾರ್ಟಿಯ ಸದಸ್ಯ.೨೦೦೧ರಲ್ಲಿ ಟಿಡಿಪಿಯಿಂದ ಹೊರಾಬಂದು ತೆಲಂಗಾಣ ರಾಷ್ಟ್ರ ಸಮಿತಿ(ಟಿ ಆರ್ ಎಸ್) ಕಟ್ಟಲು ಮುಂದಾದರು.ತೆಲಂಗಾಣವನ್ನು ಪ್ರತ್ಯೇಕಿಸುವುದೇ ಇದರ ಮುಖ್ಖ ಉದ್ದೆಶವಾಗಿತ್ತು.ಮುಂದೆ ೨೦೦೪ರ ಚುನಾವಣೆ ಸಮಯದಲ್ಲಿ ವೈ ಎಸ್ ರಾಜಶೇಖರ ರೆಡ್ಡಿ ಕೆಸಿಆರ್ ಜೊತೆ ತೆಲಂಗಾಣ ರಚನೆಯ ಕುರಿತು ಭರವಸೆ ನೀಡಿದರು.ಆದರೆ ಚುನಾವಣೆಯ ನಂತರ ವೈ ಎಸ್ ರಾಜಶೇಖರ ರೆಡ್ಡಿ ಕೊಟ್ಟ ಮಾತನ್ನು ಉಳಿಸಿಕೊಳ್ಳಲಿಲ್ಲ. ಬದಲಾಗಿ ತೆಲಗಾಣದ ವಿರುದ್ಧ ಕಾಂಗ್ರೆಸ್ ಗೆ ವರದಿ ಸಲ್ಲಿಸಿದರು.ಈ ಸಂಬಂಧ ಟಿ ಆರ್ ಎಸ್ ಕಾಂಗ್ರೆಸ್ ನಿಂದ ಬೆಂಬಲ ವಾಪಾಸ್ ಪಡೆದುಕೊಂಡಿತು.ಆ ಹೊತ್ತು ಪ್ರಮುಖ ಪಕ್ಷಗಳಾದ ಬಿಜೆಪಿ ಮತ್ತು ಸಿಪಿಐ ಟಿ ಆರ್ ಎಸ್ ಬೆಂಬಲಕ್ಕೆ ನಿಂತವು.೨೦೦೯ರಲ್ಲಿ ಕೆಸಿಆರ್ ಉಪವಾಸ ಸತ್ಯಾಗ್ರಹ ಕೈಗೊಂಡಾಗ ಮತ್ತೆ ಚಳುವಳಿ ಹಿಂದಿನ ರೂಪ ಪಡೆದುಕೊಂದಿತು.ಹಲವಾರು ಸಂಘ-ಸಂಸ್ಥೆಗಳು ನೆರವಿಗೆ ಬಂದವು.ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಜಸ್ಟೀಸ್ ಬಿ ಎನ್ ಶ್ರೀ ಕೃಷ್ಣ ಒಳಗೊಂಡ ಸಮಿತಿಯನ್ನು ರಚಿಸಿ ವರದಿ ನೀಡಲು ಹೇಳಿತು.೨೦೧೧ ಜನವರಿಯಲ್ಲಿ ವರದಿ ಬಂದಿದೆಯಾದರೂ ರಾಜಕೀಯ ತಿಕ್ಕಾಟದಿಂದಾಗಿ ಪರಿಹಾರ ಕಂಡುಬಂದಿಲ್ಲ.


Comments

Popular posts from this blog

ಯುವ ಜನತೆ ಮತ್ತು ಸಾಮಾಜಿಕ ತಾಣಗಳು

        ಸಂ ಪರ್ಕ ಮಾಧ್ಯಮಗಳು ಒಂದೆರಡಲ್ಲ,ಹಲವು ಬಗೆಯವು.ಅನಾದಿಕಾಲದಿಂದಲೂ ಇಂತಹ ಮಾಧ್ಯಮಗಳು ಜಾರಿಯಲ್ಲಿವೆ. ಕಾಲ ಬದಲಾದಂತೆ ಶೀಘ್ರ ಸಂಪರ್ಕ ಕಲ್ಪಿಸಬಹುದಾದ ಸಾಧನಗಳು ಬರಲಾರಂಭಿಸಿದವು.ಇಂದಿನ ಈ-ಮೇಲ್,ಸಾಮಾಜಿಕ ತಾಣಗಳು (ಫೇಸ್ ಬುಕ್,ಟ್ವಿಟ್ಟರ್..) ಪ್ರಚಲಿತ ಸಾಧನಗಳು.ಆದರೆ ಸಾಂಪ್ರದಾಯಿಕ ಪತ್ರ ವ್ಯವಹಾರಕ್ಕೆ ಇದ್ದ ಗೈರತ್ತು ಈ ಮಾಧ್ಯಮಗಳಲ್ಲಿ ಕಾಣುವುದು ಕಷ್ಟ.ಆದರೆ ಹೊಸತನಕ್ಕೆ ಅಂಟಿಕೊಳ್ಳುವ ಅನಿವಾರ್ಯತೆ ಬೇರೆಯದೇ ಪ್ರಪಂಚಕ್ಕೆ ಕರೆದೊಯ್ಯುತ್ತವೆ.ಎಲ್ಲೋ-ಎಂದೋ ಭೇಟಿಯಾದವರು, ಯಾವುದೋ ಊರಿನಲ್ಲಿರುವವರು ಹೀಗೆ ಹತ್ತು ಹಲವು ಕಾರಣಗಳಿಂದ ದೂರವಾದವರನ್ನು ಹತ್ತಿರಕ್ಕೆ,ಸದಾ ಸಂಪರ್ಕದಲ್ಲಿರುವಂತೆ ಮಾಡುವ ಛಾತಿ ಸಾಮಾಜಿಕ ತಾಣಗಳಂತಹ ಅಂತರ್ಜಾಲ ಸಂಬಂಧಿ ವ್ಯವಸ್ಥೆಗಳಿಗಿವೆ.ವಯಸ್ಸಿನ ಅಂತರವಿಲ್ಲದೇ ಎಲ್ಲರನ್ನು ಆಕರ್ಷಿಸುವ ತಾಣಗಳು ಮನೆ-ಮನಗಳಲ್ಲಿ ಹಸುರಾಗಿವೆ.ಇವುಗಳ ಬಳಕೆ ಹೆಚ್ಚಾಗುತ್ತಲೇ ಇದೆ.ಒಂದು ಘಳಿಗೆಯೂ ಬಿಟ್ಟು ಇರಲಾರದಷ್ಟು ಪ್ರಭಾವ ಬೀರಿವೆ.ಭಾರತ ಫೇಸ್ ಬುಕ್ ಬಳಕೆಯಲ್ಲಿ ವಿಶ್ವದಲ್ಲೇ ಮೂರನೇ ಸ್ಥಾನದಲ್ಲಿದೆ.        ಯುವ ಜನಾಂಗ ಈ ತಾಣಗಳ ಅತಿ ಹೆಚ್ಚು ಬಳಕೆ ಮಾಡುತ್ತಿರುವುದು ಗೊತ್ತಿರುವ ವಿಚಾರವೆ.ಗೆಳೆಯರ ಬಳಗ ಕಟ್ಟಿಕೊಳ್ಳುವ ಆಸಕ್ತಿ ಹೆಚ್ಚಿಸುತ್ತಿರುವ ಸಾಮಾಜಿಕ ತಾಣಗಳು ಓದಿನ ಮೇಲಿರಬೇಕಾದ ಗಮನ ಕುಂಠಿತಗೊಳಿಸುತ್ತಿದೆ ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ.ಇದರಲ್ಲಿ ಒಂದಷ್ಟು ಸತ್ಯವಿದೆ.ದಿನದ ಸುಮಾರು

ಮಾದಕ ಅಧ್ವಾನ

ಧೂ ಮಪಾನ, ಮದ್ಯಪಾನದಂತೆ ಮಾದಕ ದ್ರವ್ಯ ಸೇವನೆಯ ಚಟ ಹೊಸ ತಲೆಮಾರಿನ ಯುವಕ/ಯುವತಿಯರಲ್ಲಿ ವಿದೇಶಿ ಮೋಹದಂತೆ ಸದ್ದಿಲ್ಲದೆ ಹರಡುತ್ತಿದೆ. ಷೋಕಿಗಾಗಿ, ದೈಹಿಕ ಮತ್ತು ಮಾನಸಿಕ ನೋವಿನಿಂದ ಕೆಲ ಕ್ಷಣ ದೂರವಾಗಲು ಇದರ ಬಳಕೆಯಾಗುತ್ತಿದೆ. ಇದಕ್ಕೆ ದಾಸರಾಗುವವರಲ್ಲಿ ಹೆಚ್ಚಿನವರು 18 ರಿಂದ 30 ವರ್ಷದೊಳಗಿನವರು. ಜಗತ್ತಿನೆಲ್ಲೆಡೆ ಸುಮಾರು 500 ಬಿಲಿಯನ್ ಮೊತ್ತದ ಮಾದಕ ವಸ್ತುಗಳ ವಹಿವಾಟು ನಡೆಯುತ್ತದೆ. ಪೆಟ್ರೋಲಿಯಂ ಮತ್ತು ಶಸ್ತ್ರಾಸ್ತ್ರ ಉದ್ದಿಮೆಯ ನಂತರದ ಸ್ಥಾನ ದಕ್ಕಿದೆ! ಪ್ರತಿಷ್ಠೆ ಎಂದುಕೊಂಡಿರುವ ಯುವ ಜನಾಂಗದ ಮೊಂಡುತನ, ಸಾವಿನ ಬಾಗಿಲು ತಟ್ಟುವಂತೆಯೂ ಮಾಡಿದೆ. ದೇಶದಲ್ಲಿ ಸುಮಾರು ಒಂದು ಕೋಟಿ ಹೆರಾಯಿನ್ ವ್ಯಸನಿಗಳಿದ್ದಾರೆ. ಕೆಲ ತಿಂಗಳ ಹಿಂದೆ, ಮಂಗಳೂರಿನ ವಿದ್ಯಾರ್ಥಿನಿಯೋರ್ವಳು ಈ ದುಷ್ಚಟಕ್ಕೆ ಬಲಿಯಾದ ಘಟನೆ ನಮ್ಮ ಮುಂದಿದೆ. ನೆರೆಯ ಪಾಕಿಸ್ತಾನದಿಂದ ಇದರ ವ್ಯವಸ್ಥಿತ ಸರಬರಾಜು ನಡೆಯುತ್ತಿದೆ ಎಂಬ ಗುಮಾನಿಯೂ ಇದೆ. ಅದರಲ್ಲೂ ಕರಾವಳಿ ಪ್ರದೇಶ ವಾಮಮಾರ್ಗ ಕರುಣಿಸಿ ಡ್ರಗ್ ಮಾಫಿಯಾಕ್ಕೆ ತೆರೆದುಕೊಂಡಿದೆ. ಹಾಗಿದ್ದರೆ, ಡ್ರಗ್ಸ್ ಅಥವಾ ಮಾದಕ ವಸ್ತುಗಳ ಕುರಿತಾದ ಪಕ್ಷಿ ನೋಟ ಇಲ್ಲಿದೆ. ಮಾನಸಿಕ ಮತ್ತು ದೈಹಿಕ ಬದಲಾವಣೆಗೆ ಕಾರಣವಾಗುವ ವಸ್ತುಗಳಿಗೆ ಮಾದಕ ವಸ್ತು ಎನ್ನಲಾಗುತ್ತದೆ. ಇದು ಘನ, ದ್ರವ ಅಥವಾ ಅನಿಲ ರೂಪದಲ್ಲಿರುತ್ತದೆ. ವ್ಯಕ್ತಿಯ ನರಮಂಡಲದ ಮೇಲೆ ಪ್ರಭಾವ ಬೀರುವ ಮೂರು ಮುಖ್ಯ ಮಾದಕ ವಸ್ತುಗಳ ವಿಧಗಳು: ಡಿಪ

ಒಂದು ಸಾಲಿನ ಕತೆ

ಒಂದೇ ಸಾಲಿನಲ್ಲಿ ಉತ್ತರಿಸಲಾಗದು ಬದುಕೆಂಬ ಕ್ಲಿಷ್ಟ ಪ್ರಶ್ನೆ ಪತ್ರಿಕೆಗೆ. ಆಕಾಶಕ್ಕೆ ಏಣಿ ಇಟ್ಟಂತೆ, ಜೀವಮಾನವೇ ಜಾರಿ ಹೋಗುತ್ತದೆ. ದಿನ, ವಾರ, ತಿಂಗಳು ಕೊನೆಗೆ ಸಾಲು ಸಾಲಾಗಿ. ಪರಿವೆಯೇ ಇಲ್ಲದೆ ಕಳೆದುಹೋಗುತ್ತವೆ, ರಾತ್ರಿ ಬೆಳಗಾದಂತೆ ಸಾಲುಗಳು! ಈ ಸಾಲಿನಲ್ಲಿ ಆಗದ್ದು, ಮುಂದಿನ ಸಾಲಿನಲ್ಲಿ ಮಾಡುವ ಇರಾದೆ, ಪ್ರೌಢಿಮೆಯ ಭ್ರಮೆ ಮೈಮನವಿಡೀ ಹಬ್ಬುತ್ತದೆ, ಕಾಲಾಂತರ ಕಡೆಗಣಿಸಿ. ದಿನ ಎಣಿಸಿ, ಗುಣಿಸಿ, ಭಾಗಿಸುವಷ್ಟರಲ್ಲಿ ಆ ಸಾಲೂ ತುಳಿದಿರುತ್ತದೆ ನಿರ್ಗಮನದ ಹಾದಿ. ಮನಸ್ಸು ಮರುಗುತ್ತದೆ ಸಾಲು ಸಾಲುವುದಿಲ್ಲವೆಂದು. ಖಾಲಿ ಕೈಯಲ್ಲಿ ಬಂದು ಹೋಗುವ ನಮಗೂ, ಸಾಲುಗಳಿಗೂ ವ್ಯತ್ಯಾಸವಿಲ್ಲ. ಇಪ್ಪತ್ತೈದರ ಗುಣಾಕಾರದ ಹಬ್ಬಗಳಿಗೆ ಯಾವ ಸಾಲಿನ ಹಂಗಿಹುದೋ ಜಾಸ್ತಿ ? ಸಾಧನೆ, ಪ್ರತಿಷ್ಠೆಯ ಬೆಂಬತ್ತುವ ನಾವು ಸಾಲುಗಳ ಸಾಲಗಾರರಲ್ಲವೆ ? ನೋಡು-ನೋಡುತ್ತಿದ್ದಂತೆ ಮತ್ತೆ ಬಂದೆರಗುತ್ತದೆ, ಯಾವ ಭಕ್ಷೀಸನ್ನೂ ಬೇಡದೆ ಹೊಸ ಸಾಲು, ಹೊಸ ಸವಾಲು, ಹೊಸ ಅಹವಾಲು..!! (ಕೃಪೆ : ಕನ್ನಡ ಪ್ರಭ ) Deevatige by Sandeep Phadke is licensed under a Creative Commons Attribution-NonCommercial 4.0 International License . Based on a work at http://www.deevatige.blogspot.in/ .