ದಿನೇ-ದಿನೇ ಸ್ವತಂತ್ರ ರಾಜ್ಯದ ಕುರಿತಾಗಿ ತೆಲಂಗಾಣ ಹೋರಾಟಗಾರರ ಕೂಗು ಮುಗಿಲು ಮುಟ್ಟುತ್ತಿದೆ.ಈ ಹೋರಾಟ ಇಂದು ನಿನ್ನೆಯದಲ್ಲ.ಹಲವಾರು ಮಂದಿ ಪ್ರಾಣ ತೆತ್ತಿದ್ದಾರೆ. ಆದರೆ ಇನ್ನೂ ಪರಿಹಾರ ಕಂಡುಕೊಳ್ಳುವಲ್ಲಿ ಸಫಲವಾಗಿಲ್ಲ.ತೆಲಂಗಾಣ ಆಂಧ್ರ ಪ್ರದೇಶದ ಒಂದು ಭಾಗ.ಹೈದರಾಬಾದ್ ನಿಜಾಮರು ಇದರ ಆಡಳಿತ ನಡೆಸುತ್ತಿದ್ದರು.ಪ್ರಾಂತೀಯವಾಗಿ ಆಂಧ್ರವನ್ನು ತೆಲಂಗಾಣ,ರಾಯಲಸೀಮ ಮತ್ತು ಆಂಧ್ರ ಕರಾವಳಿಗಳೆಂದು ಮೂರು ಭಾಗಗಳಾಗಿ ವಿಂಗಡಿಸಲಾಗಿದೆ.ಒಟ್ಟು ೨೩ ಜಿಲ್ಲೆಗಳಲ್ಲಿ ೧೦ ಜಿಲ್ಲೆಗಳು ತೆಲಂಗಾಣದ ತೆಕ್ಕೆಯಲ್ಲಿವೆ.ಸ್ವಾತಂತ್ರ್ಯ ನಂತರ ನಿಜಾಮರು ತಮ್ಮ ರಾಜ್ಯವನ್ನು ವಿಲೀನಗೊಳಿಸಲು ಒಪ್ಪಿರಲಿಲ್ಲ. ಆದರೆ ೧೯೪೮ರಲ್ಲಿ ಒತ್ತಾಯದಿಂದ ಭಾರತ ಸರ್ಕಾರ ಆಂಧ್ರದ ಜೊತೆಗೂಡಿಸಿತು.ಮದ್ರಾಸ್ ರಾಜ್ಯದ ಭಾಗವಗಿದ್ದ ರಾಯಲಸೀಮ ಮತ್ತು ಆಂಧ್ರ ಕರಾವಳಿ ಪ್ರದೇಶಗಳು ತೆಲಂಗಾಣದ ಜೊತೆ ಒಂದುಗೂಡಿದವು.ಆಂಧ್ರ ಪ್ರದೇಶ ರಾಜ್ಯಕ್ಕೆ ಅಸ್ತಿತ್ವ ಸಿಕ್ಕ ನಂತರ ತೆಲಂಗಾಣದ ಕೆಲವು ಭಾಗಗಳು ಕರ್ನಾಟಕ ಮತ್ತು ಮಹಾರಾಷ್ಟ್ರದ ಪಾಲಾದವು.೧೯೬೯ರಿಂದೀಚೆಗೆ ಪ್ರತ್ಯೇಕ ರಾಜ್ಯದ ಚಳುವಳಿ ಉಗ್ರ ರೂಪ ಪಡೆದುಕೊಂಡಿತು.ಉಸ್ಮಾನಿಯ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಪ್ರಾರಂಭಿಸಿದ ಚಳುವಳಿಯಲ್ಲಿ ಸಾವಿರಾರು ಜನರು ಭಾಗಿಗಳಾದರು. ಸುಮಾರು ೩೫೦ ಮಂದಿ ಸಾವನ್ನಪ್ಪಿದರು.ಆಂಧ್ರ ಮಾಜಿ ಮುಖ್ಯ ಮಂತ್ರಿ ಚನ್ನ ರೆಡ್ಡಿ ಈ ಚಳುವಳಿಯ ಪೂರ್ಣ ಲಾಭ ಪಡೆದುಕೊಂಡರು.’ತೆಲಂಗಾಣ ಪ್ರಜಾ ಸಮಿತಿ’ ಎಂಬ ಪಕ್ಷ ಕಟ್ಟಿ ಚಳುವಳಿಗೆ ಮತ್ತಷ್ಟು ರಂಗು ತುಂಬಿದರು.ಆ ಹೊತ್ತಿಗೆ ಇಂದಿರಾ ಗಾಂಧಿ ಚನ್ನ ರೆಡ್ಡಿಯನ್ನು ಮು.ಮಂತ್ರಿ ಮಾಡಿ ಚಳುವಳಿಗೆ ಲಗಾಮು ಹಾಕಿದರು.ಇಷ್ಟಕ್ಕೂ ಈ ಚಳುವಳಿಯ ಉದ್ದೇಶ ತೀರ ಭಿನ್ನವಾಗಿದ್ದವು.:
೧. ಸಾಂಸ್ಕೃತಿಕ ಭಿನ್ನತೆ--ನಿಜಾಮರ ಕಾಲದಲ್ಲಿ ಉತ್ತರ ಭಾರತದ ಆಚರಣೆಗಳು ಚಾಲ್ತಿಯಲ್ಲಿದ್ದು,ಆಂಧ್ರಕ್ಕೆ ಒಗ್ಗಿಕೊಳ್ಳುವುದು ತ್ರಾಸದಾಯಕವಾಗಿತ್ತು.೨.ತೆಲಂಗಾಣದ ಹೆಚ್ಚಿನ ಜನರಿಗೆ ಮೀಸಲಾತಿ ವ್ಯವಸ್ಥೆ ಇತ್ತು. ರಾಜ್ಯದ ವಿಲೀನದಿಂದ ಮೀಸಲಾತಿಗೆ ಪೆಟ್ಟು ಬೀಳಬಹುದೆಂಬ ಹೆದರಿಕೆ.೩.ಆಂಧ್ರ ಮದ್ರಾಸ್ ಅಧೀನದಲ್ಲಿ ಹೆಚ್ಚು ಬೆಳವಣಿಗೆ ಕಂಡಿತ್ತು.ಅದರ ಜೊತೆ ಸ್ಪರ್ಧೆಗಿಳಿಯುವುದು ತೆಲಂಗಾಣಕ್ಕೆ ಕಷ್ಟ ಸಾಧ್ಯವಾಗಿತ್ತು.ಪ್ರಸ್ತುತ ಚಳುವಳಿಯ ಮುಂದಾಳತ್ವ ವಹಿಸಿರುವ ಕೆ.ಚಂದ್ರಶೇಖರ ರಾವ್,೧೯೯೧ರಲ್ಲಿ ತೆಲುಗು ದೇಶಂ ಪಾರ್ಟಿಯ ಸದಸ್ಯ.೨೦೦೧ರಲ್ಲಿ ಟಿಡಿಪಿಯಿಂದ ಹೊರಾಬಂದು ತೆಲಂಗಾಣ ರಾಷ್ಟ್ರ ಸಮಿತಿ(ಟಿ ಆರ್ ಎಸ್) ಕಟ್ಟಲು ಮುಂದಾದರು.ತೆಲಂಗಾಣವನ್ನು ಪ್ರತ್ಯೇಕಿಸುವುದೇ ಇದರ ಮುಖ್ಖ ಉದ್ದೆಶವಾಗಿತ್ತು.ಮುಂದೆ ೨೦೦೪ರ ಚುನಾವಣೆ ಸಮಯದಲ್ಲಿ ವೈ ಎಸ್ ರಾಜಶೇಖರ ರೆಡ್ಡಿ ಕೆಸಿಆರ್ ಜೊತೆ ತೆಲಂಗಾಣ ರಚನೆಯ ಕುರಿತು ಭರವಸೆ ನೀಡಿದರು.ಆದರೆ ಚುನಾವಣೆಯ ನಂತರ ವೈ ಎಸ್ ರಾಜಶೇಖರ ರೆಡ್ಡಿ ಕೊಟ್ಟ ಮಾತನ್ನು ಉಳಿಸಿಕೊಳ್ಳಲಿಲ್ಲ. ಬದಲಾಗಿ ತೆಲಗಾಣದ ವಿರುದ್ಧ ಕಾಂಗ್ರೆಸ್ ಗೆ ವರದಿ ಸಲ್ಲಿಸಿದರು.ಈ ಸಂಬಂಧ ಟಿ ಆರ್ ಎಸ್ ಕಾಂಗ್ರೆಸ್ ನಿಂದ ಬೆಂಬಲ ವಾಪಾಸ್ ಪಡೆದುಕೊಂಡಿತು.ಆ ಹೊತ್ತು ಪ್ರಮುಖ ಪಕ್ಷಗಳಾದ ಬಿಜೆಪಿ ಮತ್ತು ಸಿಪಿಐ ಟಿ ಆರ್ ಎಸ್ ಬೆಂಬಲಕ್ಕೆ ನಿಂತವು.೨೦೦೯ರಲ್ಲಿ ಕೆಸಿಆರ್ ಉಪವಾಸ ಸತ್ಯಾಗ್ರಹ ಕೈಗೊಂಡಾಗ ಮತ್ತೆ ಚಳುವಳಿ ಹಿಂದಿನ ರೂಪ ಪಡೆದುಕೊಂದಿತು.ಹಲವಾರು ಸಂಘ-ಸಂಸ್ಥೆಗಳು ನೆರವಿಗೆ ಬಂದವು.ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಜಸ್ಟೀಸ್ ಬಿ ಎನ್ ಶ್ರೀ ಕೃಷ್ಣ ಒಳಗೊಂಡ ಸಮಿತಿಯನ್ನು ರಚಿಸಿ ವರದಿ ನೀಡಲು ಹೇಳಿತು.೨೦೧೧ ಜನವರಿಯಲ್ಲಿ ವರದಿ ಬಂದಿದೆಯಾದರೂ ರಾಜಕೀಯ ತಿಕ್ಕಾಟದಿಂದಾಗಿ ಪರಿಹಾರ ಕಂಡುಬಂದಿಲ್ಲ.
Comments