Skip to main content

ಯುವ ಜನತೆ ಮತ್ತು ಸಾಮಾಜಿಕ ತಾಣಗಳು

  
    ಸಂಪರ್ಕ ಮಾಧ್ಯಮಗಳು ಒಂದೆರಡಲ್ಲ,ಹಲವು ಬಗೆಯವು.ಅನಾದಿಕಾಲದಿಂದಲೂ ಇಂತಹ ಮಾಧ್ಯಮಗಳು ಜಾರಿಯಲ್ಲಿವೆ. ಕಾಲ ಬದಲಾದಂತೆ ಶೀಘ್ರ ಸಂಪರ್ಕ ಕಲ್ಪಿಸಬಹುದಾದ ಸಾಧನಗಳು ಬರಲಾರಂಭಿಸಿದವು.ಇಂದಿನ ಈ-ಮೇಲ್,ಸಾಮಾಜಿಕ ತಾಣಗಳು (ಫೇಸ್ ಬುಕ್,ಟ್ವಿಟ್ಟರ್..) ಪ್ರಚಲಿತ ಸಾಧನಗಳು.ಆದರೆ ಸಾಂಪ್ರದಾಯಿಕ ಪತ್ರ ವ್ಯವಹಾರಕ್ಕೆ ಇದ್ದ ಗೈರತ್ತು ಈ ಮಾಧ್ಯಮಗಳಲ್ಲಿ ಕಾಣುವುದು ಕಷ್ಟ.ಆದರೆ ಹೊಸತನಕ್ಕೆ ಅಂಟಿಕೊಳ್ಳುವ ಅನಿವಾರ್ಯತೆ ಬೇರೆಯದೇ ಪ್ರಪಂಚಕ್ಕೆ ಕರೆದೊಯ್ಯುತ್ತವೆ.ಎಲ್ಲೋ-ಎಂದೋ ಭೇಟಿಯಾದವರು, ಯಾವುದೋ ಊರಿನಲ್ಲಿರುವವರು ಹೀಗೆ ಹತ್ತು ಹಲವು ಕಾರಣಗಳಿಂದ ದೂರವಾದವರನ್ನು ಹತ್ತಿರಕ್ಕೆ,ಸದಾ ಸಂಪರ್ಕದಲ್ಲಿರುವಂತೆ ಮಾಡುವ ಛಾತಿ ಸಾಮಾಜಿಕ ತಾಣಗಳಂತಹ ಅಂತರ್ಜಾಲ ಸಂಬಂಧಿ ವ್ಯವಸ್ಥೆಗಳಿಗಿವೆ.ವಯಸ್ಸಿನ ಅಂತರವಿಲ್ಲದೇ ಎಲ್ಲರನ್ನು ಆಕರ್ಷಿಸುವ ತಾಣಗಳು ಮನೆ-ಮನಗಳಲ್ಲಿ ಹಸುರಾಗಿವೆ.ಇವುಗಳ ಬಳಕೆ ಹೆಚ್ಚಾಗುತ್ತಲೇ ಇದೆ.ಒಂದು ಘಳಿಗೆಯೂ ಬಿಟ್ಟು ಇರಲಾರದಷ್ಟು ಪ್ರಭಾವ ಬೀರಿವೆ.ಭಾರತ ಫೇಸ್ ಬುಕ್ ಬಳಕೆಯಲ್ಲಿ ವಿಶ್ವದಲ್ಲೇ ಮೂರನೇ ಸ್ಥಾನದಲ್ಲಿದೆ.
       ಯುವ ಜನಾಂಗ ಈ ತಾಣಗಳ ಅತಿ ಹೆಚ್ಚು ಬಳಕೆ ಮಾಡುತ್ತಿರುವುದು ಗೊತ್ತಿರುವ ವಿಚಾರವೆ.ಗೆಳೆಯರ ಬಳಗ ಕಟ್ಟಿಕೊಳ್ಳುವ ಆಸಕ್ತಿ ಹೆಚ್ಚಿಸುತ್ತಿರುವ ಸಾಮಾಜಿಕ ತಾಣಗಳು ಓದಿನ ಮೇಲಿರಬೇಕಾದ ಗಮನ ಕುಂಠಿತಗೊಳಿಸುತ್ತಿದೆ ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ.ಇದರಲ್ಲಿ ಒಂದಷ್ಟು ಸತ್ಯವಿದೆ.ದಿನದ ಸುಮಾರು ೬-೭ ಗಂಟೆ ಅಂತರ್ಜಾಲದಲ್ಲೇ ಕಾಲಹರಣ ಮಾಡುವವರಿದ್ದಾರೆ.ವಿದ್ಯಾರ್ಥಿ ದೆಸೆಯಲ್ಲಿ ಮಾರಕವಾಗಿ ಪರಿಣಮಿಸಿರುವ ಈ ತಾಣಗಳ ಪ್ರವೇಶಕ್ಕೆ ವಯೋಮಿತಿ ಇಲ್ಲದಿರುವುದು ಮತ್ತೊಂದು ದೌರ್ಭಾಗ್ಯ.ಅತಿಯಾದರೆ ಅಮೃತವೂ ವಿಷವೆಂಬಂತೆ ವ್ಯಕ್ತಿಯ ಕೆಲವು ದೈನಂದಿನ/ವಿಶೇಷ ಹುರುಳುಗಳು ಅನಗತ್ಯವಾಗಿ ಕಾಣಬೇಕಾದಾಗ ಮೂಡುವ ಭಾವನೆಗಳು ಆ ಕ್ಷಣ ಮನಸ್ಸಿನ ಮೇಲೆ ಆಘಾತ ಉಂಟುಮಾಡುವ ಸಾಧ್ಯತೆಗಳಿರುತ್ತವೆ.ಹೀಗಾಗಿ ಸಂಬಂಧಗಳು ಬಿಗಿಯಾಗುವುದರ ಜೊತೆಗೆ ಬಿಗಡಾಯಿಸುವ ಸಂದರ್ಭಗಳು  ಬಂದಲ್ಲಿ ಸಂಶಯವಿಲ್ಲ.ಇಂತಹ ಹಲವು ಪ್ರಕರಣಗಳಿಗೆ ಸಾಮಾಜಿಕ ತಾಣಗಳು ಸಾಕ್ಷಿಯಾಗಿವೆ.ಎಷ್ಟೊ ಜನ ಈ ತಾಣಗಳಿಂದ ದೂರ ಸರಿದವರೂ ಇದ್ದಾರೆ.
       ಮುಖ್ಯವಾಗಿ ಎಲ್ಲ ಕಲಹಗಳಿಗೆ ವೇದಿಕೆ ಸಜ್ಜಾಗುವುದು ಗೌಪ್ಯತೆಯೆಂಬುವುದು ಇಲ್ಲದಿದ್ದಾಗ.ಈ ಹಿನ್ನೆಲೆಯಲ್ಲಿ ೨೦೦೯ರಲ್ಲಿ ಫೇಸ್ ಬುಕ್ ಬಹಿಷ್ಕಾರಕ್ಕೆ ಒಳಗಾಗಿತ್ತು.ಈಗಿನ ಸುಧಾರಿತ ಫೇಸ್ ಬುಕ್ ಒಂದಷ್ಟು ಗೌಪ್ಯತೆಗೆ ಬೆಲೆ ತೆತ್ತಂತಿದೆ.ಇತ್ತೀಚೆಗೆ ಈರ್ವರು ಸರ್ಕಾರಿ ನೌಕರರು ತಮ್ಮ ಕಛೇರಿ ವಿಚಾರಗಳನ್ನು ಫೇಸ್ ಬುಕ್ ನಲ್ಲಿ ಹಂಚಿಕೊಂಡು ವಜಾವಾಗಿದ್ದು ಹಲವರಿಗೆ ಪಾಠ ಕಲಿಸಿದೆ.ಹುಡುಗ ತಾನು ಹುಡುಗಿಯೆಂದು ಹೇಳಿಕೊಳ್ಳುವ ನಕಲಿ ಖಾತೆಗಳು ಮನುಷ್ಯನ ಭಾವನೆಗಳಿಗೆ ಬೇರೆಯದೇ ಅರ್ಥ ಕಲ್ಪಿಸುತ್ತವೆ.ಗಂಡು-ಹೆಣ್ಣುಗಳಲ್ಲಿರಬೇಕಾದ ಸಾಮಾಜಿಕ ಮೌಲ್ಯಗಳು ವಿನಾಶದ ಅಂಚಿಗೆ ಬಂದಿವೆ.ಹೆಣ್ಣಿಗಿರುವ ಪೂಜನೀಯ ಸ್ಥಾನ ಮರೆಯಾಗಿದೆ.ಹೆಣ್ಣು ಕೂಡ ತನ್ನ ವೈಯಾರವನ್ನು ಪ್ರದರ್ಶಿಸುವುದು ಉಚಿತವೆಂದುಕೊಂಡಂತಿದೆ.ಆಗ ಅಲ್ಲಿ ಒಟ್ಟಾಗುವ ಒಂದಷ್ಟು ಅಭಿಪ್ರಾಯಗಳು,ಅವನ್ನು ಅರಗಿಸಿಕೊಳ್ಳಲಾಗದ ಆಪ್ತರ ವೇದನೆ ಮಾನಸಿಕ ಅತ್ಯಾಚಾರದಂತೆಯೆ ಅಲ್ಲವೆ..?ಸಂಸ್ಕೃತಿ-ಸಂಸ್ಕಾರಗಳನ್ನು ನೆಚ್ಚಿಕೊಂಡು ಬಂದಿರುವ ಹಿರಿಯರಿಗೆ ಮಾನ ಹರಾಜಿಗಿಟ್ಟ ಅನುಭವವಾಗದಿರದೇ..?ಪ್ರತಿಯೊಂದಕ್ಕೂ ಇತಿ-ಮಿತಿ ಇರಲೇಬೇಕು.ಎಲ್ಲರ ಜೊತೆ ಮುಕ್ತ ಮಾತು-ಹರಟೆಗಳು ತೂಕ ಕಳೆದುಕೊಳ್ಳಬಾರದು.ನೈಜತೆಯನ್ನು ಬಿಂಬಿಸುವುದು ತಪ್ಪಲ್ಲ,ಆದರೆ ಗೌಪ್ಯತೆಯನ್ನು ಕಾಪಾಡಿಕೊಳ್ಳುವುದು ಮುಖ್ಯ.ಅಂತರ್ಜಾಲದ ಮುಖೇನ ಒಳಿತು-ಕೆಡುಕುಗಳೆರಡನ್ನೂ ಅನುಭವಿಸಬಹುದು.ಸದಾ ಅನ್ಯರ ಖಾಸಗಿತನವನ್ನು ನೋಡುವ ಚಾಳಿ ಯುವ ಜನರಲ್ಲಿ ಕಡಿಮೆಯಾದಲ್ಲಿ ಸಮಯದ ಸದ್ಬಳಕೆಯಾದಂತೆ.


Comments

ಸಂತೋಷ್ ಎಸ್ ಆರ್ said…
ಇಂದಿನ ಸಮಾಜಕ್ಕೆ ಹಿಡಿದ ಕನ್ನಡಿಯಂತಿದೆ ಈ ನಿಮ್ಮ ಲೇಖನ. ನೂರಕ್ಕೆ ನೂರರಷ್ಟು ಸತ್ಯ.

Popular posts from this blog

ಜಾತಿರಾಜಕಾರಣ ಯಾಕೆ ಬೇಕು..?

      ನ ಮ್ಮದು ಜ್ಯಾತ್ಯಾತೀತ ದೇಶ.ಹೀಗೆಂದು ಹೇಳಿಕೊಳ್ಳುವವರಿಗೆ ಲೆಕ್ಕವಿಲ್ಲ.ಆದರೂ,ಅನೇಕ ರೀತಿ-ರಿವಾಜು,ಜಾತಿ-ಧರ್ಮಗಳನ್ನು ಹೊಂದಿರುವ ದೇಶದಲ್ಲಿ ಸಾಮರಸ್ಯ ಕಾಣಬೇಕಾದರೆ ಜ್ಯಾತ್ಯಾತೀತತೆಯ ಕಡೆ ಒಲವು ಮೂಡಿಸುವ ಪ್ರಯತ್ನ ಮಾಡುವ ಅನಿವಾರ್ಯತೆ ಇದೆ.ಸರಳ ನಡೆ-ನುಡಿ,ತಾತ್ವಿಕ ವಿಚಾರಗಳ ಕುರಿತ ಚರ್ಚೆ,ಸಹೋದರತೆಯನ್ನು ಸಾರುವ ಗುಣಗಳನ್ನು ಬೆಳೆಸಿಕೊಳ್ಳುವ ರೂಢಿ ಮಾಡಿಕೊಳ್ಳಬೇಕಿದೆ.ಜನರ ನಡುವೆ ಒಮ್ಮತದ ನಿರ್ಧಾರ ಕೈಗೊಳ್ಳಲು ಪ್ರಯತ್ನಗಳು ಸಾಗಬೇಕಿವೆ.ದಿನೇ-ದಿನೇ ಹೆಚ್ಚುತ್ತಿರುವ ಜನಸಂಖ್ಯೆಯಲ್ಲಿ ಕೆಲವೊಂದು ಜಾತಿ-ಧರ್ಮಕ್ಕೆ ಸೇರಿದವರ ಸಂಖ್ಯೆ ಜಾಸ್ತಿಯಿರಬಹುದು.ಇದರಿಂದ ಸಾಮಾಜಿಕ ಬದಲಾವಣೆಗಳು ಸಾಧ್ಯ.ಹೀಗಾಗಿ ಸಮತೋಲನ ಕಾಯ್ದುಕೊಳ್ಳುವ ಜವಾಬ್ದಾರಿ ಮತ್ತೆ ಜನರದೇ ಆಗಿರುತ್ತದೆ.ಆದರೆ ಇದೆಲ್ಲಕ್ಕೂ ಸಂವಿಧಾನತ್ಮಕ ರೂಪು-ರೇಷೆಗಳಿರುತ್ತವೆ.ಮತದಾನದ ಮೂಲಕ ಆಯ್ಕೆಯಾಗಿರುವ ವ್ಯಕ್ತಿ ಊರಿನ ಪ್ರತಿನಿಧಿಯಾಗಿರುತ್ತಾನೆ.ರಾಜಕೀಯ ಪಕ್ಷಗಳು ಮೊದಲ ಹಂತದಲ್ಲಿ ಜನರನ್ನು ವಿಭಾಗಿಸಿಬಿಡುತ್ತದೆ.ಇಲ್ಲಿ ನಡೆಯುವ ಎಲ್ಲಾ ಲೆಕ್ಕಾಚಾರಗಳು ಜನರ ಹಿತದೃಷ್ಠಿಯಿಂದ ಎಂಬ ಮುಖವಾಡ ಹೊತ್ತಿರುತ್ತದೆಯಲ್ಲದೆ ಅಸಲಿ ಅಂಶ ಬೇರೆಯದೇ ಆಗಿರುತ್ತದೆ.          ರಾಜಕೀಯಕ್ಕೂ ಜಾತಿ-ಧರ್ಮಕ್ಕೂ ಯಾವುದೇ ಸಂಬಂಧವಿಲ್ಲ.ಆದರೆ ಇಂದು ನಡೆಯುತ್ತಿರುವುದೆಲ್ಲ ಜಾತಿ ರಾಜಕಾರಣವೆ.ಇದರ ಬೇರು ವಿಶಾಲವಾಗಿ ಹರಡಿ ನಿಂತಿದೆ.ಮತದಾರರನ್ನು ವಿ...

-: ಮುತ್ತಿನ ಹನಿಗಳು :-

------೧------ ಚುಂ- ಬನಕ್ಕೆ ಲಗ್ಗೆಯಿಡುವ ಯುವ ಜೋಡಿಗಳು ಅದೆಂತಹ ಪ್ರಕೃತಿ ಆರಾಧಕರು..! ------೨------ ಹೂದೋಟದಲ್ಲಿ ಕಾಣದ ಪತಂಗಗಳು ಯಥೇಚ್ಛ ಮಧು ಸವಿಯಲು ಯುವತಿಯರ ಹಿಂದೆ ಬಿದ್ದಿವೆಯಂತೆ..!