೨ಜಿ ತರಂಗಾಂತರ ವಿತರಣೆಯಲ್ಲಿ ನಡೆದಿರುವ ಹಗರಣ ಭಾರತ ಕಂಡ ಅತೀ ದೊಡ್ಡ ಪ್ರಕರಣಗಳಲ್ಲೊಂದು.ಈವರೆಗೆ ದೇಶದ ಇತಿಹಾಸದಲ್ಲಿ ನಡೆದಿರುವ ಎಲ್ಲಾ ಹಗರಣಗಳನ್ನು ಹಿಮ್ಮೆಟ್ಟಿದೆ.ಯುಪಿಎ ಸರ್ಕಾರಕ್ಕೆ ಮತ್ತೊಂದು ಕಳಂಕ ತಟ್ಟಿಂದಂತಾಗಿದೆ.ಪ್ರತಿಪಕ್ಷಗಳು ಇದನ್ನೇ ಚುನಾವಣೆಯ ದಾಳವನ್ನಾಗಿಸಿಕೊಳ್ಳಲು ತುದಿಗಾಲಲ್ಲಿ ನಿಂತಿವೆ.ಬಿಜೆಪಿ ಸೇರಿದಂತೆ ಹಲವು ಪಕ್ಷಗಳು ಜೆಪಿಸಿ (Joint Parliamentory Committee)ಯ ರಚನೆಗೆ ಒತ್ತಾಯಿಸಿಯಾಯಿತು.ಈ ಮಧ್ಯೆ ಸರ್ಕಾರ ಪಿಎಸಿ (Public Accounts Committee) ಗೆ ಹಗರಣದ ಕುರಿತು ತನಿಖೆ ನಡೆಸಲು ಸೂಚಿಸಿತು.ಇಷ್ಟೇಯಲ್ಲದೆ ಸಿಎಜಿ (Comptroller and Audit General of India) ಸಲ್ಲಿಸಿದ ವರದಿ ಪ್ರಕಾರ ಸುಮರು ೧.೭೬ ಲಕ್ಷ ಕೋಟಿ ರುಪಾಯಿಗಳ ಭಾರೀ ನಷ್ಟದ ಲೆಕ್ಕ ನಿಬ್ಬೆರಗಾಗುವಂತೆ ಮಾಡಿತು.ಬಿಜೆಪಿ ಮತ್ತು ಎನ್ ಡಿ ಎ ಯ ಮಿತ್ರ ಪಕ್ಷಗಳಾದ ಎಐಎಡಿಎಂಕೆ ,ಸಮಾಜವಾದಿ ಪಾರ್ಟಿ,ಬಿಜೆಡಿಗಳು ಸ್ವತಂತ್ರ ಭಾರತದ ದೊಡ್ಡ ಹಗರಣವೆಂದು ಸಾಬೀತು ಮಾಡಲು ಮುಂದಾದವು.ದೂರ ಸಂಪರ್ಕ ಸಚಿವರಾಗಿದ ಎ.ರಾಜಾ ಜೈಲು ಸೇರಿದ್ದು ಮತ್ತಷ್ಟು ಕುತೂಹಲ ಕೆರಳಿಸಿತು.ಮಾಧ್ಯಮಗಳಲ್ಲಿ ಹಠಾತ್ ಬೆಳವಣಿಗೆಯ ಸುದ್ದಿ ಬಿತ್ತರವಾಗಲು ಶುರುವಾಯಿತು.ತರಂಗಾಂತರ ಹರಾಜು ಪ್ರಕ್ರಿಯೆಯಲ್ಲಿ ನಡೆದ ದೋಷ ಯುಪಿಎ ಸರ್ಕಾರವನ್ನೆ ಅಲುಗಾಡುವಂತೆ ಮಾಡಿತು.ವಿಚಾರಣೆ ನಡೆಯುತ್ತಿದ್ದಂತೆ ಹಿಂದಿನ ವಿತ್ತ ಸಚಿವ ಪಿ.ಚಿದಂಬರಂ, ಕನ್ನಿಮೋಳಿ ಮತ್ತು ಹಿಂದಿನ ಗೃಹ ಸಚಿವ ಪ್ರಣಬ್ ಮುಖರ್ಜೀ ಹೆಸರು ಕೇಳಲು ಶುರುವಾಯಿತು.
ಸ್ವಾನೆ ಟೆಲಿಕಾಂ,ಯುನಿಟೆಕ್ ವಯರ್ ಲೆಸ್ ಮತ್ತು ಲೂಪ್ ಟೆಲಿಕಾಂಗಳಂತಹ ಟೆಲಿಕಾಂ ಕ್ಷೇತ್ರದಲ್ಲಿ ಪರಿಚಿತವಲ್ಲದ ಕಂಪನಿಗಳಿಗೆ ೨೦೦೮ರಲ್ಲಿ ತರಂಗಾಂತರಗಳನ್ನು ೨೦೦೧ರಲ್ಲಿನ ದರದಲ್ಲಿ ವಿತರಿಸಿದ್ದು ಚರ್ಚೆಗೆ ಗ್ರಾಸವಾಯಿತು.ಈ ಸಂಬಂಧ ಯಾವುದೇ ಹರಾಜು ಪ್ರಕ್ರಿಯೆ ನಡಿದಿರಲಿಲ್ಲ. ಮಾಹಿತಿಗಳ ಪ್ರಕಾರ Telecom Regulatory Authority of India (TRAI) ಮತ್ತು ಇತರೆ ಸಚಿವಾಲಯಗಳ ಅಭಿಪ್ರಾಯವನ್ನು ಪರಿಗಣಿಸದೇ ಈ ಸಂಸ್ಥೆಗಳಿಗೆ ಹಕ್ಕುಗಳನ್ನು ನೀಡಲಾಗಿತ್ತು.ಪ್ರಥಮ ಆದ್ಯತೆಯ ಮೇರೆಗೆ ಹಂಚಿದ ತರಂಗಾತರಗಳನ್ನು ವಿದೇಶಿ ಕಂಪನಿಗಳಿಗೆ ಹೆಚ್ಚಿನ ಮೊತ್ತಕ್ಕೆ ಮಾರಾಟ ಮಾಡಿ ಹಣಗಳಿಸಿಕೊಂಡಿದ್ದು ಈಗ ಇತಿಹಾಸ.ಈ ಹಗರಣದಿಂದಾಗಿ ಕೆಲವರು ಜೈಲು ಸೇರಿದ್ದು ತನಿಖೆ ಪೂರಕ ವರದಿ ಕೊಟ್ಟಲ್ಲಿ ಇನ್ನಷ್ಟು ನಿಜಾಂಶ ಹೊರಬರಬಹುದು.
ಧೂ ಮಪಾನ, ಮದ್ಯಪಾನದಂತೆ ಮಾದಕ ದ್ರವ್ಯ ಸೇವನೆಯ ಚಟ ಹೊಸ ತಲೆಮಾರಿನ ಯುವಕ/ಯುವತಿಯರಲ್ಲಿ ವಿದೇಶಿ ಮೋಹದಂತೆ ಸದ್ದಿಲ್ಲದೆ ಹರಡುತ್ತಿದೆ. ಷೋಕಿಗಾಗಿ, ದೈಹಿಕ ಮತ್ತು ಮಾನಸಿಕ ನೋವಿನಿಂದ ಕೆಲ ಕ್ಷಣ ದೂರವಾಗಲು ಇದರ ಬಳಕೆಯಾಗುತ್ತಿದೆ. ಇದಕ್ಕೆ ದಾಸರಾಗುವವರಲ್ಲಿ ಹೆಚ್ಚಿನವರು 18 ರಿಂದ 30 ವರ್ಷದೊಳಗಿನವರು. ಜಗತ್ತಿನೆಲ್ಲೆಡೆ ಸುಮಾರು 500 ಬಿಲಿಯನ್ ಮೊತ್ತದ ಮಾದಕ ವಸ್ತುಗಳ ವಹಿವಾಟು ನಡೆಯುತ್ತದೆ. ಪೆಟ್ರೋಲಿಯಂ ಮತ್ತು ಶಸ್ತ್ರಾಸ್ತ್ರ ಉದ್ದಿಮೆಯ ನಂತರದ ಸ್ಥಾನ ದಕ್ಕಿದೆ! ಪ್ರತಿಷ್ಠೆ ಎಂದುಕೊಂಡಿರುವ ಯುವ ಜನಾಂಗದ ಮೊಂಡುತನ, ಸಾವಿನ ಬಾಗಿಲು ತಟ್ಟುವಂತೆಯೂ ಮಾಡಿದೆ. ದೇಶದಲ್ಲಿ ಸುಮಾರು ಒಂದು ಕೋಟಿ ಹೆರಾಯಿನ್ ವ್ಯಸನಿಗಳಿದ್ದಾರೆ. ಕೆಲ ತಿಂಗಳ ಹಿಂದೆ, ಮಂಗಳೂರಿನ ವಿದ್ಯಾರ್ಥಿನಿಯೋರ್ವಳು ಈ ದುಷ್ಚಟಕ್ಕೆ ಬಲಿಯಾದ ಘಟನೆ ನಮ್ಮ ಮುಂದಿದೆ. ನೆರೆಯ ಪಾಕಿಸ್ತಾನದಿಂದ ಇದರ ವ್ಯವಸ್ಥಿತ ಸರಬರಾಜು ನಡೆಯುತ್ತಿದೆ ಎಂಬ ಗುಮಾನಿಯೂ ಇದೆ. ಅದರಲ್ಲೂ ಕರಾವಳಿ ಪ್ರದೇಶ ವಾಮಮಾರ್ಗ ಕರುಣಿಸಿ ಡ್ರಗ್ ಮಾಫಿಯಾಕ್ಕೆ ತೆರೆದುಕೊಂಡಿದೆ. ಹಾಗಿದ್ದರೆ, ಡ್ರಗ್ಸ್ ಅಥವಾ ಮಾದಕ ವಸ್ತುಗಳ ಕುರಿತಾದ ಪಕ್ಷಿ ನೋಟ ಇಲ್ಲಿದೆ. ಮಾನಸಿಕ ಮತ್ತು ದೈಹಿಕ ಬದಲಾವಣೆಗೆ ಕಾರಣವಾಗುವ ವಸ್ತುಗಳಿಗೆ ಮಾದಕ ವಸ್ತು ಎನ್ನಲಾಗುತ್ತದೆ. ಇದು ಘನ, ದ್ರವ ಅಥವಾ ಅನಿಲ ರೂಪದಲ್ಲಿರುತ್ತದೆ. ವ್ಯಕ್ತಿಯ ನರಮಂಡಲದ ಮೇಲೆ ಪ್ರಭಾವ ಬೀರುವ ಮೂರು ಮುಖ್ಯ ಮಾದಕ ವಸ್ತುಗಳ ವಿಧಗಳು: ಡಿಪ...
Comments