Skip to main content

Posts

Showing posts from October, 2012

ಮಾರುತ್ತರ

ಬೀಸುಗತ್ತಿಗೆ ಸಿಲುಕಿ ಗಾಳಿ ಚೀರುತ್ತಿದೆ ಒಡನಾಡಿಯ ದುಡುಕಿಗೆ ಬೆದರಿ. ದಣಿವರಿಯುವ ಜೀವಗಳಿಗೆ ತಂಪೆರೆದು ಮುದ ನೀಡುವ ತಂಗಾಳಿಗೆ ಇದೆಂತಹ ಅವಮಾನ..!     ಬರಡು ನೆಲ, ನದಿ-ಸಾಗರಗಳ ಮಿಂದೆದ್ದು ಎಲ್ಲೆ ಮೀರುವಂತೆ ಬಹುದೂರ ಚಾಚಿದೆ. ಅಲೆಮಾರಿಯಂತೆ ಅಲಿದು ಭೇದವಿಲ್ಲದೆ ಭಾವ ಬೆಸೆಯುವ ದಯಾಮಯಿ ದಿಕ್ಕೆಟ್ಟಿದೆ..! ಮನುಕುಲದ ಅಸಹನೆ ತಾಳಲಾರದೆ ಕೆಲವೊಮ್ಮೆ ಚಂಡಮಾರುತವಾಗುತ್ತದೆ. ತನ್ನ ಇರುವಿಕೆಯನ್ನು ಪ್ರಶ್ನಿಸಿ ಅಲ್ಲಿ-ಇಲ್ಲಿ ನಡೆಸಿದ ಪ್ರತಿಭಟನೆಗೆ ನೆಲಕಚ್ಚಿದವರು ಲೆಕ್ಕವಿಲ್ಲ..! ಪ್ರಾಣ ವಾಯುವೇ ತೇಲಿಹೋದಾಗ ಮಂದ್ರ ಮಾರುತದ ನೆನೆಗುದಿಗೆ ಬಿದ್ದ ಮನವಿ ನೆನಪಾಗುತ್ತದೆ. ಹೃದಯ ಭಾಗದಲ್ಲೊಂದು ಕಾನನ, ನಡು-ನಡುವೆ ಹರಿವ ನಿರ್ಮಲ ನೀರು..!