Skip to main content

ನಿರೀಕ್ಷೆ

‘ಅಮ್ಮಾ, ಬಂದಳೇನಮ್ಮಾ...’

ತಿಂಗಳಾಯಿತು ಹೊಸ ಬಟ್ಟೆಗೆ,
ಇನ್ನೂ ತೊಡುವ ಭಾಗ್ಯ ಬಂದಿಲ್ಲ.
ಎಲ್ಲದಕ್ಕೂ ಯುಗಾದಿ ಬರಬೇಕಂತೆ.
ಎಂದು,ಎಂತು ಬರುವಳೋ...


ಬಂದು ಹೋಗಿ,ವರುಷ ಕಳೆದು
ಯಾದಿಯಲ್ಲಿ ಮೊದಲಾಗಿ
ಮತ್ತೆ ಬರುತ್ತಿರುವಳಂತೆ.
ಲಜ್ಜೆಯಿಂದ ಹೆಜ್ಜೆಯಿಟ್ಟು,
ಮುಡಿಯ ತುಂಬ ಹಸಿರು ಹೊದ್ದು.
ಮಂದ್ರ ಮಾರುತದ ಸುಳಿಯಲಿ
ನಳನಳಿಸುವ ಸೋದರಿಗಾಗಿ
ಕಾಯುತ್ತಿದ್ದೇನೆ.
ದಿಡ್ಡಿ ಬಾಗಿಲ ತುಂಬ ಕಣ್ಣ ಪಹರೆ.


ಅಮ್ಮ ಮಾಡಿಟ್ಟ ಬಗೆ-ಬಗೆಯ ತಿನಿಸು,
ಅಪ್ಪ ತಂದಿಟ್ಟ ಹೊಸ ಪಂಚಾಂಗ,
ತಳಿರು-ತೋರಣ, ಚುಕ್ಕಿ ರಂಗೋಲಿ.
ಸಾಕಲ್ಲವೇ ಇಷ್ಟು ಅವಳ ಸತ್ಕಾರಕ್ಕೆ ?!
ಇನ್ನಾದರೂ ಬರಬಹುದಲ್ಲಾ ಆ ಯುಗಾದಿಗೆ.


ಊರು-ಕೇರಿ ತುಂಬಾ ಅವಳದೇ ಪುಕಾರು,
ಅಬಾಲವೃದ್ಧರಲ್ಲಿ ಕಾಣುತ್ತಿದೆ-
ನನ್ನಂತೆಯೇ ಹುರುಪು-ಚೈತನ್ಯ.
ಅದೆಂತಹ ಮೋಡಿಯೋ, ಮೈಮೆಯೋ !!

ನವ ಸಂವತ್ಸರದ ಭವಿಷ್ಯ ಬರೆದು,
ವಿಕಲ್ಪಗಳ ಎಡರು ತೊಡೆಯಲು,
ಕಿವಿಮಾತಿಗೆ ಮಾತು ಬೆರೆಸಲು
ಬರುವಳಂತೆ ಯುಗಾದಿ, ನಾಳಿನ ತೇದಿಗೆ.


“ಅದೋ ಅಲ್ಲಿ, ಅಪರ ಭಾನು ನಡೆದು ಹೋದ
ಚೌಕಿ ಮನೆ ಕಡೆಗೆ.
ಯುಗಾದಿಯ ಭವ್ಯ ಸ್ವಾಗತಕ್ಕೆ”.
ಅಜ್ಜಿ ಮಾತು ದಿಟವಾದರೆ ಸಾಕು.

‘ಅಮ್ಮಾ, ಯುಗಾದಿ ಬಂದಳೇ...’
ಥಟ್ಟನೆ ಬೇವು-ಬೆಲ್ಲದ ಜೊತೆ
ಎದುರುಗೊಂಡಳು –

ನನ್ನ ಅಮ್ಮ ಮತ್ತು ನನ್ನ ಯುಗಾದಿ.


(ಕೃಪೆ: ಪಂಜು)

Creative Commons License
Deevatige by Sandeep Phadke is licensed under a Creative Commons Attribution-NonCommercial 4.0 International License.
Based on a work at http://www.deevatige.blogspot.in/.

Comments

Popular posts from this blog

ಯುವ ಜನತೆ ಮತ್ತು ಸಾಮಾಜಿಕ ತಾಣಗಳು

        ಸಂ ಪರ್ಕ ಮಾಧ್ಯಮಗಳು ಒಂದೆರಡಲ್ಲ,ಹಲವು ಬಗೆಯವು.ಅನಾದಿಕಾಲದಿಂದಲೂ ಇಂತಹ ಮಾಧ್ಯಮಗಳು ಜಾರಿಯಲ್ಲಿವೆ. ಕಾಲ ಬದಲಾದಂತೆ ಶೀಘ್ರ ಸಂಪರ್ಕ ಕಲ್ಪಿಸಬಹುದಾದ ಸಾಧನಗಳು ಬರಲಾರಂಭಿಸಿದವು.ಇಂದಿನ ಈ-ಮೇಲ್,ಸಾಮಾಜಿಕ ತಾಣಗಳು (ಫೇಸ್ ಬುಕ್,ಟ್ವಿಟ್ಟರ್..) ಪ್ರಚಲಿತ ಸಾಧನಗಳು.ಆದರೆ ಸಾಂಪ್ರದಾಯಿಕ ಪತ್ರ ವ್ಯವಹಾರಕ್ಕೆ ಇದ್ದ ಗೈರತ್ತು ಈ ಮಾಧ್ಯಮಗಳಲ್ಲಿ ಕಾಣುವುದು ಕಷ್ಟ.ಆದರೆ ಹೊಸತನಕ್ಕೆ ಅಂಟಿಕೊಳ್ಳುವ ಅನಿವಾರ್ಯತೆ ಬೇರೆಯದೇ ಪ್ರಪಂಚಕ್ಕೆ ಕರೆದೊಯ್ಯುತ್ತವೆ.ಎಲ್ಲೋ-ಎಂದೋ ಭೇಟಿಯಾದವರು, ಯಾವುದೋ ಊರಿನಲ್ಲಿರುವವರು ಹೀಗೆ ಹತ್ತು ಹಲವು ಕಾರಣಗಳಿಂದ ದೂರವಾದವರನ್ನು ಹತ್ತಿರಕ್ಕೆ,ಸದಾ ಸಂಪರ್ಕದಲ್ಲಿರುವಂತೆ ಮಾಡುವ ಛಾತಿ ಸಾಮಾಜಿಕ ತಾಣಗಳಂತಹ ಅಂತರ್ಜಾಲ ಸಂಬಂಧಿ ವ್ಯವಸ್ಥೆಗಳಿಗಿವೆ.ವಯಸ್ಸಿನ ಅಂತರವಿಲ್ಲದೇ ಎಲ್ಲರನ್ನು ಆಕರ್ಷಿಸುವ ತಾಣಗಳು ಮನೆ-ಮನಗಳಲ್ಲಿ ಹಸುರಾಗಿವೆ.ಇವುಗಳ ಬಳಕೆ ಹೆಚ್ಚಾಗುತ್ತಲೇ ಇದೆ.ಒಂದು ಘಳಿಗೆಯೂ ಬಿಟ್ಟು ಇರಲಾರದಷ್ಟು ಪ್ರಭಾವ ಬೀರಿವೆ.ಭಾರತ ಫೇಸ್ ಬುಕ್ ಬಳಕೆಯಲ್ಲಿ ವಿಶ್ವದಲ್ಲೇ ಮೂರನೇ ಸ್ಥಾನದಲ್ಲಿದೆ.        ಯುವ ಜನಾಂಗ ಈ ತಾಣಗಳ ಅತಿ ಹೆಚ್ಚು ಬಳಕೆ ಮಾಡುತ್ತಿರುವುದು ಗೊತ್ತಿರುವ ವಿಚಾರವೆ.ಗೆಳೆಯರ ಬಳಗ ಕಟ್ಟಿಕೊಳ್ಳುವ ಆಸಕ್ತಿ ಹೆಚ್ಚಿಸುತ್ತಿರುವ ಸಾಮಾಜಿಕ ತಾಣಗಳು ಓದಿನ ಮೇಲಿರಬೇಕಾದ ಗಮನ ಕುಂಠಿತಗೊಳಿಸುತ್ತಿದೆ ಎಂಬ ಅಭಿಪ್ರಾಯಗಳು ಕೇಳಿಬರು...

ಗೋಡೆಗಳಿಲ್ಲ...!

(ಕವಿ ಗೋಷ್ಠಿ- ಬೆಳ್ತಂಗಡಿ ತಾ|| 11ನೇ ಕನ್ನಡ ಸಾಹಿತ್ಯ ಸಮ್ಮೇಳನ, ಮುಂಡಾಜೆ :: 20-12-2011) ದೂರವಾದಂತೆ ನೆನಪಾಗುತ್ತವೆ ಹಳೆಯ, ಬಣ್ಣ ಮಾಸಿದ ಗಟ್ಟಿ ಗೋಡೆಗಳು. ಆದರೆ, ನೆಲೆಗಾಣುವ ನಿರೀಕ್ಷೆಯಲಿ ತೆರೆದುಕೊಳ್ಳುವ ಹೆಬ್ಬಾಗಿಲಿಗೆ, ಗೋಡೆಗಳೆಂಬುದು ಮರೀಚಿಕೆ. ಅನುಕಂಪ, ಮಾನ-ಮರ್ಯಾದೆ ಬೊಗಸೆಯಲಿ ಬಚ್ಚಿಡುವ ಇನ್ನಿಲ್ಲದ ಧಾವಂತ. ದುರುಪಯೋಗವಾಗಬಹುದು ನಡು ರಾತ್ರಿ-ಹಗಲೆನ್ನದೆ, ಕಾಮಲೆ ಕಣ್ಣೆಗೆ, ಗೋಡೆಗಳಿಲ್ಲ ರಕ್ಷಣೆಗೆ. ಇಲ್ಲಿ ಗೋಡೆಗಳಿಲ್ಲ... ನೋಡುವವರು ಅದೆಷ್ಟೋ ಜನ ನಮ್ಮ ಆಟ, ಭಯ, ಆತಂಕ, ಅವಮಾನದ ವರಸೆ. ಬಯಸಿ ಬಂದವರಂತೆ ನಾವೂ ನಡೆಯುತ್ತೇವೆ ಅನಿವಾರ್ಯದ ಅಂಕದಲಿ. ನೂರು ಆಸೆಗಳನು ಹೊತ್ತು, ಟೊಂಕ ಕಟ್ಟಿ ನಿಂತವರು, ಬಳಲಿ-ಬೆಂಡಾಗುವವರೆಗೆ, ದಿಶೆ ತಪ್ಪುವವರೆಗೆ, ಅನಿರ್ದಿಷ್ಟ ಕಾಲದ ತೀರದ ಪಯಣ. ಗೋಡೆಗಳಿಲ್ಲ ಅಡೆ-ತಡೆಗೆ. ಕಣ್ಣಾ-ಮುಚ್ಚಾಲೆ ಆಟದಂತೆ ಭ್ರಷ್ಟ ಆಚಾರಗಳನ್ನು ಕದ್ದು-ಮುಚ್ಚಿ ಪರಿಪಾಲಿಸಿದರೂ, ಕೈಗೆ ಬೇಡಿ ನಿಶ್ಚಿತ. ನೋಡುತ್ತಿರುತ್ತಾರೆ ಸಹಸ್ರಾರು ಕಂದೀಲು ಹಿಡಿದು ಜನ. ಗೋಡೆಗಳೆಂಬುದು ನಿಮಿತ್ತ. ಅನುಭೋಗದ ಬದುಕು ಬೀದಿಗೆ ಬಂದಿದೆ. ಜೀವನ ಮೌಲ್ಯ ಅರಿಯದ ಜೀವಗಳು ಹೊಡೆದಾಡುತ್ತಿವೆ. ಇರಬೇಕಾದಲ್ಲಿ ಇಲ್ಲ ನಾಲ್ಕು ಗೋಡೆಗಳು.               ...

-: ಮುತ್ತಿನ ಹನಿಗಳು :-

------೧------ ಚುಂ- ಬನಕ್ಕೆ ಲಗ್ಗೆಯಿಡುವ ಯುವ ಜೋಡಿಗಳು ಅದೆಂತಹ ಪ್ರಕೃತಿ ಆರಾಧಕರು..! ------೨------ ಹೂದೋಟದಲ್ಲಿ ಕಾಣದ ಪತಂಗಗಳು ಯಥೇಚ್ಛ ಮಧು ಸವಿಯಲು ಯುವತಿಯರ ಹಿಂದೆ ಬಿದ್ದಿವೆಯಂತೆ..!