ಬ್ರಿಟೀಷರ ಸಂಕೋಲೆಯಿಂದ ಬಂಧ-ಮುಕ್ತವಾದ ನಂತರ ನಮ್ಮ ದೇಶ ಅನೇಕ ಚಳುವಳಿಗೆ ಸಾಕ್ಷಿಯಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದಕ್ಕೆ ಅವಕಾಶವೂ ಇದೆ. ಜನರ ನಸುವಿನ ಸಮಸ್ಯೆಗಳು ಪರಿಹಾರ ಕಂಡುಕೊಳ್ಳದೆ ಇದ್ದಾಗ, ಉಗ್ರ ರೂಪಕ್ಕೆ ಪರಿವರ್ತನೆಗೊಂಡು ಸತ್ಯಾಗ್ರಹ-ಹರತಾಳ-ಆಂದೋಲನದ ಹಾದಿ ತುಳಿಯುತ್ತದೆ.ತಾವೇ ಆರಿಸಿ,ಆಡಳಿತ ನಡೆಸುವ ಅವಕಾಶ ಕೊಟ್ಟೀರುವಗ,ಬಗೆಹರಿಯದ ಸಮಸ್ಯೆಗಳಿಗೆ ಉತ್ತರ ಹುಡುಕುವ ಗೋಜಿಗೆ ಹೋಗದ ಮಂತ್ರಿ ಮಹೋದಯರಿಗೆ ಹಿಡಿ ಶಾಪ ಹಾಕದೆ ಇರುವರೇ..? ಜನ ಲೋಕಪಾಲ ಮಸೂದೆ ಜಾರಿಯಲ್ಲೂ ಅದೇ ರಾಗ-ತಾಳ.
ಇಡೀ ದೇಶವೇ ಮಸೂದೆ ಜಾರಿಯಗಲೆಂದು ಟೊಂಕ ಕಟ್ಟೀ ನಿಂತಿದೆ. ಇದರಿಂದ ಭ್ರಷ್ಟಾಚಾರ ನಿರ್ಮೂಲನೆ ಸಾಧ್ಯವೆನ್ನುವುದು ಜನಾಭಿಪ್ರಾಯ.ಈ ಚಳುವಳಿಯ ನಾಯಕತ್ವ ವಹಿಸಿರುವ ಸಮಾಜ ಸೇವಕ ಅಣ್ಣಾ ಹಜಾರೆ, ದೇಶ ಅತಿ ಗೌರವದಿಂದ ಕಾಣುತ್ತಿರುವ ಗಾಂಧೀವಾದಿ.ಅಬಾಲ-ವೃದ್ಧರೆನ್ನದೆ ಚಳುವಳಿಯಲ್ಲಿ ಪಾಲ್ಗೊಳುತ್ತಿರುವ ಜನರಿಂದಾಗಿ ಕೇಂದ್ರ ಸರಕಾರ ತಲೆ ತಗ್ಗಿಸುವಂತಾಗಿದೆ. ಈ ಚಳುವಳಿ ಸಫಲವಾದಲ್ಲಿ, ಅತೀ ದೊಡ್ಡ ಪ್ರಜಾತಂತ್ರ ದೇಶವೆಂದು ಮತ್ತೆ ಸಾಬೀತುಪಡಿಸಿದಂತಾಗುತ್ತದೆ. ದೇಶದ ಹಿತಕ್ಕಾಗಿ ದುಡಿಯುತ್ತಿರುವ ಅಸಂಖ್ಯ ಜನರಿಗೆ ಅಭಿನಂದನೆ ಸಲ್ಲಿಸಲೇ ಬೇಕು.
ಸಂ ಪರ್ಕ ಮಾಧ್ಯಮಗಳು ಒಂದೆರಡಲ್ಲ,ಹಲವು ಬಗೆಯವು.ಅನಾದಿಕಾಲದಿಂದಲೂ ಇಂತಹ ಮಾಧ್ಯಮಗಳು ಜಾರಿಯಲ್ಲಿವೆ. ಕಾಲ ಬದಲಾದಂತೆ ಶೀಘ್ರ ಸಂಪರ್ಕ ಕಲ್ಪಿಸಬಹುದಾದ ಸಾಧನಗಳು ಬರಲಾರಂಭಿಸಿದವು.ಇಂದಿನ ಈ-ಮೇಲ್,ಸಾಮಾಜಿಕ ತಾಣಗಳು (ಫೇಸ್ ಬುಕ್,ಟ್ವಿಟ್ಟರ್..) ಪ್ರಚಲಿತ ಸಾಧನಗಳು.ಆದರೆ ಸಾಂಪ್ರದಾಯಿಕ ಪತ್ರ ವ್ಯವಹಾರಕ್ಕೆ ಇದ್ದ ಗೈರತ್ತು ಈ ಮಾಧ್ಯಮಗಳಲ್ಲಿ ಕಾಣುವುದು ಕಷ್ಟ.ಆದರೆ ಹೊಸತನಕ್ಕೆ ಅಂಟಿಕೊಳ್ಳುವ ಅನಿವಾರ್ಯತೆ ಬೇರೆಯದೇ ಪ್ರಪಂಚಕ್ಕೆ ಕರೆದೊಯ್ಯುತ್ತವೆ.ಎಲ್ಲೋ-ಎಂದೋ ಭೇಟಿಯಾದವರು, ಯಾವುದೋ ಊರಿನಲ್ಲಿರುವವರು ಹೀಗೆ ಹತ್ತು ಹಲವು ಕಾರಣಗಳಿಂದ ದೂರವಾದವರನ್ನು ಹತ್ತಿರಕ್ಕೆ,ಸದಾ ಸಂಪರ್ಕದಲ್ಲಿರುವಂತೆ ಮಾಡುವ ಛಾತಿ ಸಾಮಾಜಿಕ ತಾಣಗಳಂತಹ ಅಂತರ್ಜಾಲ ಸಂಬಂಧಿ ವ್ಯವಸ್ಥೆಗಳಿಗಿವೆ.ವಯಸ್ಸಿನ ಅಂತರವಿಲ್ಲದೇ ಎಲ್ಲರನ್ನು ಆಕರ್ಷಿಸುವ ತಾಣಗಳು ಮನೆ-ಮನಗಳಲ್ಲಿ ಹಸುರಾಗಿವೆ.ಇವುಗಳ ಬಳಕೆ ಹೆಚ್ಚಾಗುತ್ತಲೇ ಇದೆ.ಒಂದು ಘಳಿಗೆಯೂ ಬಿಟ್ಟು ಇರಲಾರದಷ್ಟು ಪ್ರಭಾವ ಬೀರಿವೆ.ಭಾರತ ಫೇಸ್ ಬುಕ್ ಬಳಕೆಯಲ್ಲಿ ವಿಶ್ವದಲ್ಲೇ ಮೂರನೇ ಸ್ಥಾನದಲ್ಲಿದೆ. ಯುವ ಜನಾಂಗ ಈ ತಾಣಗಳ ಅತಿ ಹೆಚ್ಚು ಬಳಕೆ ಮಾಡುತ್ತಿರುವುದು ಗೊತ್ತಿರುವ ವಿಚಾರವೆ.ಗೆಳೆಯರ ಬಳಗ ಕಟ್ಟಿಕೊಳ್ಳುವ ಆಸಕ್ತಿ ಹೆಚ್ಚಿಸುತ್ತಿರುವ ಸಾಮಾಜಿಕ ತಾಣಗಳು ಓದಿನ ಮೇಲಿರಬೇಕಾದ ಗಮನ ಕುಂಠಿತಗೊಳಿಸುತ್ತಿದೆ ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ.ಇದರಲ್ಲಿ ಒಂದಷ್ಟು ಸತ್ಯವಿದೆ.ದಿನದ ಸುಮಾರು
Comments