೧. ಮೀನು ಹಿಡಿಯಲು, ಗಾಳದ ಜೊತೆ ನದಿ ತಟಕ್ಕೆ ಹೋಗಿದ್ದ. ಸಂಜೆಯಾದರೂ ಬಾರದೇ ಇದ್ದಾಗ ಹುಡುಕಾಟ ಶುರುವಾಯಿತು. ಉದ್ರಿಕ್ತ ಮೀನುಗಳೇ ಸಾಯಿಸಿವೆ ಎಂದು ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದರು. ಈಗ ಕೊಲೆಗಾರ ಮೀನು ಸಿಗುವುದು ಕಷ್ಟವೆನ್ನುತ್ತಿದ್ದಾರೆ!!
-------------------------------------------------------------------------------------------
೨. ಮಳೆ ಬರುವ ತಯಾರಿಯಾಗಿತ್ತು. ಆಟವಾಡುತ್ತಿದ್ದ ಮಗುವೊಂದು ದೂರದಲ್ಲಿ ನಿಂತಿದ್ದ ತಾಯಿಯೆಡೆಗೆ ಹಾದಿ ತುಳಿದಿತ್ತು. ಆದರೆ ಅರ್ಧ ದಾರಿ ಬರುವಷ್ಟರಲ್ಲಿ ಜೋರಾಗಿ ಅಳಲಾರಂಭಿಸಿತು. ಏನೆಂದು ಗ್ರಹಿಸಲಾಗದೆ ತಾಯಿ ಕಂಗಾಲಾಗಿ ಹೋದಳು. ಸವೆದ ಚಪ್ಪಲಿ ಹಾಕಿಕೊಂಡಿದ್ದ ಮಗುವಿಗೆ, ಇನ್ನಷ್ಟು ದೂರ ಓಡಿದರೆ ಕಾಲು ಸವೆಯಲು ಶುರುವಾದೀತೆಂಬ ಭಯ ಕಾಡುತ್ತಿತ್ತಂತೆ.
-------------------------------------------------------------------------------------
೩. ಆಕೆ ಡಾನ್ಸರ್, ರಿಯಾಲಿಟಿ ಷೋವಲ್ಲಿ ಕೋಟಿ ಬಾಚಲು ಅದ್ಭುತ ಪ್ರದರ್ಶನ ನೀಡುತ್ತಿದ್ದಳು. ನಾಡಿನೆಲ್ಲೆಡೆ ಅಭಿಮಾನಿಗಳ ಬಳಗವೂ ಬೆಳೆದಿತ್ತು. ಆದರೆ ಓಮ್ಮೆ ಅವಮಾನವಾಗಿ, ಆಕೆ ಕೂಗಾಡಿದ ದೃಶ್ಯಗಳು ಬಿತ್ತರವಾಗಿದ್ದವು. ಇದರಿಂದಾಗಿ ಕಣ್ಣೀರೇ ಹಾಕದವಳು ಮಾನಸಿಕವಾಗಿ ನೊಂದು ಹೋದಳು. ಮೊನ್ನೆ ಅವಳ ಆತ್ಮಕ್ಕೆ ಶಾಂತಿ ಕೋರಿ ಮೌನ ಪ್ರಾರ್ಥನೆ ನಡೆಯಿತು.
------------------------------------------------------------------------------------
Comments