ಆಸೆ-ಹತಾಶೆಗಳ ನಡುವಿನ ಜೀವನ ಅದೆಷ್ಟೋ ಪಾಠ ಕಲಿಸುತ್ತದೆ.ಕಾಡುವ ನೋವಿಗೆ ಸಾಂತ್ವನ ಸಿಗದೇ ವಿವಿಲನೆ ಒದ್ದಾಡುವ ಸನ್ನಿವೇಶವೂ ಉಂಟಾಗುತ್ತದೆ.ಸುಖ-ದುಃಖದ ಆಟದ ನಡುವೆ ಎಲ್ಲೋ ಜಿನುಗುವ ಮನಃ ಶಾಂತಿ ಇನ್ನೇನೋ ಮಾಡಲು ಪ್ರೇರೇಪಿಸುತ್ತದೆ.ಇಬ್ಬನಿಗಳ ಸಾಲಿನಂತೆ ಚಿಗುರೋದೇವ ಮನಸ್ಸು ಆಕ್ರಮಣಕಾರಿಯಾಗಿ
ಬಿಡುತ್ತದೆ.ಬದುಕು ಚರ ವಸ್ತುವೆಂದು ಅನಿಸುವುದೇ ಇಲ್ಲ.ನೋಡುಗರ ಕಣ್ಣಿಗೆ ಹಬ್ಬವಾಗಿ ಕಾಣುವ ಹೊತ್ತಿಗೆ ಕಲ ಸರಿದಿರುತ್ತದೆ.ಭಗ್ನ ಕನಸುಗಳು ದೊಂದಿ ಹಿಡಿದು ನಿಂತಿರುತ್ತವೆ.ಯಾವುದರ ಪರಿವೆಯೂ ಇಲ್ಲದಂತೆ ದೇಹ ನೀರವ ಮೌನಕ್ಕೆ ಜಾರುತ್ತದೆ.ಆ ಹೊತ್ತಿನ ಭಾವೋದ್ವೇಗ ಜನ ಮಾನದ ಮರೆಯದಂತೆ ಮಾಡುತ್ತದೆ,ಭಾವನೆಗಳ ಅರ್ಥದ ಸಾಕ್ಷಾತ್ಕಾರವಾಗುತ್ತದೆ.ಇಬ್ಬನಿ ಕರಗುವ ಮುನ್ನ, ಉಸಿರು ನಿಲ್ಲುವ ಮುನ್ನ ಉಂಟಾಗುವ ಭೀತಿ ಒಂದೇ ಅಲ್ಲವೇ...?
ಮುಂಜಾವಿನ ತೆಕ್ಕೆಯೊಳು ಹಸಿರುಟ್ಟ ಭೂರಮೆಯ ಒಡಲಲ್ಲಿ ಹನಿಯುತಿವೆ ಹನಿಗಳು ಸಾಲು ಸಾಲಾಗಿ... ಮರ-ಗಿಡಗಳ ಎಲೆಗಳ ಮೇಲೆ ದೃಶ್ಯವಾಗುತ್ತವೆ ದಣಿದ-ಮಣಿದ ಮೈ-ಮನಕ್ಕೆ ಜೀವ ತುಂಬುತ್ತವೆ ಪನ್ನೀರ ಪಸರುತ್ತಾ... ಅಲ್ಪಾಯುಷಿಯಾದರು ದೀಪದ ಬುಡ್ಡಿಯಂತೆ ಉದಾರ ಗುಣ ಚಳಿಯನ್ನೂ ಲೆಕ್ಕಿಸದೇ ಅವಿರತ ದುಡಿಮೆ... ಬೆಳಕಿನ ಪರದೆ ಸರಿದಂತೆ ಮತ್ತಷ್ಟು ಮೆರುಗು ಕ್ಷಣಮಾತ್ರದಲ್ಲಿ ಜೀವದ ಹಂಗು ತೊರೆದು ಮಂಗ ಮಾಯ... ತನ್ನ ಶಾಂತ ಚಿತ್ತ ಸೌಮ್ಯ ಸ್ವಭಾವ ಮತ್ತೆ ಹುಟ್ಟಲು ಕಾರಣ ಇಬ್ಬನಿ ಇರಿಯುವುದಿಲ್ಲ ಇಹ-ಪರರ ... ದೀವಟಿಗೆ by Sandeep Phadke is licensed under a Creative Commons Attribution-NonCommercial-NoDerivs 2.5 India License .
Comments