ಆಸೆ-ಹತಾಶೆಗಳ ನಡುವಿನ ಜೀವನ ಅದೆಷ್ಟೋ ಪಾಠ ಕಲಿಸುತ್ತದೆ.ಕಾಡುವ ನೋವಿಗೆ ಸಾಂತ್ವನ ಸಿಗದೇ ವಿವಿಲನೆ ಒದ್ದಾಡುವ ಸನ್ನಿವೇಶವೂ ಉಂಟಾಗುತ್ತದೆ.ಸುಖ-ದುಃಖದ ಆಟದ ನಡುವೆ ಎಲ್ಲೋ ಜಿನುಗುವ ಮನಃ ಶಾಂತಿ ಇನ್ನೇನೋ ಮಾಡಲು ಪ್ರೇರೇಪಿಸುತ್ತದೆ.ಇಬ್ಬನಿಗಳ ಸಾಲಿನಂತೆ ಚಿಗುರೋದೇವ ಮನಸ್ಸು ಆಕ್ರಮಣಕಾರಿಯಾಗಿ
ಬಿಡುತ್ತದೆ.ಬದುಕು ಚರ ವಸ್ತುವೆಂದು ಅನಿಸುವುದೇ ಇಲ್ಲ.ನೋಡುಗರ ಕಣ್ಣಿಗೆ ಹಬ್ಬವಾಗಿ ಕಾಣುವ ಹೊತ್ತಿಗೆ ಕಲ ಸರಿದಿರುತ್ತದೆ.ಭಗ್ನ ಕನಸುಗಳು ದೊಂದಿ ಹಿಡಿದು ನಿಂತಿರುತ್ತವೆ.ಯಾವುದರ ಪರಿವೆಯೂ ಇಲ್ಲದಂತೆ ದೇಹ ನೀರವ ಮೌನಕ್ಕೆ ಜಾರುತ್ತದೆ.ಆ ಹೊತ್ತಿನ ಭಾವೋದ್ವೇಗ ಜನ ಮಾನದ ಮರೆಯದಂತೆ ಮಾಡುತ್ತದೆ,ಭಾವನೆಗಳ ಅರ್ಥದ ಸಾಕ್ಷಾತ್ಕಾರವಾಗುತ್ತದೆ.ಇಬ್ಬನಿ ಕರಗುವ ಮುನ್ನ, ಉಸಿರು ನಿಲ್ಲುವ ಮುನ್ನ ಉಂಟಾಗುವ ಭೀತಿ ಒಂದೇ ಅಲ್ಲವೇ...?
ನ ಮ್ಮದು ಜ್ಯಾತ್ಯಾತೀತ ದೇಶ.ಹೀಗೆಂದು ಹೇಳಿಕೊಳ್ಳುವವರಿಗೆ ಲೆಕ್ಕವಿಲ್ಲ.ಆದರೂ,ಅನೇಕ ರೀತಿ-ರಿವಾಜು,ಜಾತಿ-ಧರ್ಮಗಳನ್ನು ಹೊಂದಿರುವ ದೇಶದಲ್ಲಿ ಸಾಮರಸ್ಯ ಕಾಣಬೇಕಾದರೆ ಜ್ಯಾತ್ಯಾತೀತತೆಯ ಕಡೆ ಒಲವು ಮೂಡಿಸುವ ಪ್ರಯತ್ನ ಮಾಡುವ ಅನಿವಾರ್ಯತೆ ಇದೆ.ಸರಳ ನಡೆ-ನುಡಿ,ತಾತ್ವಿಕ ವಿಚಾರಗಳ ಕುರಿತ ಚರ್ಚೆ,ಸಹೋದರತೆಯನ್ನು ಸಾರುವ ಗುಣಗಳನ್ನು ಬೆಳೆಸಿಕೊಳ್ಳುವ ರೂಢಿ ಮಾಡಿಕೊಳ್ಳಬೇಕಿದೆ.ಜನರ ನಡುವೆ ಒಮ್ಮತದ ನಿರ್ಧಾರ ಕೈಗೊಳ್ಳಲು ಪ್ರಯತ್ನಗಳು ಸಾಗಬೇಕಿವೆ.ದಿನೇ-ದಿನೇ ಹೆಚ್ಚುತ್ತಿರುವ ಜನಸಂಖ್ಯೆಯಲ್ಲಿ ಕೆಲವೊಂದು ಜಾತಿ-ಧರ್ಮಕ್ಕೆ ಸೇರಿದವರ ಸಂಖ್ಯೆ ಜಾಸ್ತಿಯಿರಬಹುದು.ಇದರಿಂದ ಸಾಮಾಜಿಕ ಬದಲಾವಣೆಗಳು ಸಾಧ್ಯ.ಹೀಗಾಗಿ ಸಮತೋಲನ ಕಾಯ್ದುಕೊಳ್ಳುವ ಜವಾಬ್ದಾರಿ ಮತ್ತೆ ಜನರದೇ ಆಗಿರುತ್ತದೆ.ಆದರೆ ಇದೆಲ್ಲಕ್ಕೂ ಸಂವಿಧಾನತ್ಮಕ ರೂಪು-ರೇಷೆಗಳಿರುತ್ತವೆ.ಮತದಾನದ ಮೂಲಕ ಆಯ್ಕೆಯಾಗಿರುವ ವ್ಯಕ್ತಿ ಊರಿನ ಪ್ರತಿನಿಧಿಯಾಗಿರುತ್ತಾನೆ.ರಾಜಕೀಯ ಪಕ್ಷಗಳು ಮೊದಲ ಹಂತದಲ್ಲಿ ಜನರನ್ನು ವಿಭಾಗಿಸಿಬಿಡುತ್ತದೆ.ಇಲ್ಲಿ ನಡೆಯುವ ಎಲ್ಲಾ ಲೆಕ್ಕಾಚಾರಗಳು ಜನರ ಹಿತದೃಷ್ಠಿಯಿಂದ ಎಂಬ ಮುಖವಾಡ ಹೊತ್ತಿರುತ್ತದೆಯಲ್ಲದೆ ಅಸಲಿ ಅಂಶ ಬೇರೆಯದೇ ಆಗಿರುತ್ತದೆ. ರಾಜಕೀಯಕ್ಕೂ ಜಾತಿ-ಧರ್ಮಕ್ಕೂ ಯಾವುದೇ ಸಂಬಂಧವಿಲ್ಲ.ಆದರೆ ಇಂದು ನಡೆಯುತ್ತಿರುವುದೆಲ್ಲ ಜಾತಿ ರಾಜಕಾರಣವೆ.ಇದರ ಬೇರು ವಿಶಾಲವಾಗಿ ಹರಡಿ ನಿಂತಿದೆ.ಮತದಾರರನ್ನು ವಿ...
Comments